Important
Trending
ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿರುವ ವೇಳೆ ಕಾಲುಜಾರಿ ಬಾವಿಯಲ್ಲಿ ಬಿದ್ದು ಎಲೆಕ್ಟ್ರಿಷಿಯನ್ ಸಾವು
![](http://i0.wp.com/vismaya24x7.com/wp-content/uploads/2023/08/electrision-death.jpg?fit=1280%2C720&ssl=1)
ಕುಮಟಾ: ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುವೇಳೆ ಎಲೆಕ್ಟ್ರಿಷಿಯನ್ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಮೂರೂರಿನಲ್ಲಿ ನಡೆದಿದೆ. ನಾಗರಾಜ ಗಾವಡಿ (31) ಎಂಬಾತನೆ ಮೃತಪಟ್ಟ ವ್ಯಕ್ತಿ. ಈತ ಕರೆಂಟ್ ರೀಪೇರಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಕೆಲಸ ಮುಗಿಸಿಕೊಂಡು ನಡೆದುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ನೆಲಬಾವಿಯಲ್ಲಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![](http://i0.wp.com/vismaya24x7.com/wp-content/uploads/2023/07/i-school-new.jpg?resize=708%2C398&ssl=1)
ವಿಸ್ಮಯ ನ್ಯೂಸ್, ಕುಮಟಾ