Follow Us On

Google News
Important
Trending

ಊಟ ಮಾಡಿ ಮಲಗಿದ ವೇಳೆ ಹೃದಯಾಘಾತ: ಹಿರಿಯ ನೇತ್ರ ತಜ್ಞ ಇನ್ನಿಲ್ಲ

ಹೊನ್ನಾವರ: ಪಟ್ಟಣದ ರಥಬೀದಿಯಲ್ಲಿ ಹಲವು ದಶಕಗಳಿಂದ ಕಣ್ಣಿನ ಆಸ್ಪತ್ರೆ ನಡೆಸುತ್ತಿದ್ದ ಕರ್ಕಿ ಮೂಲದ ಹಿರಿಯ ವೈದ್ಯ ರಾಗಿದ್ದ ಡಾ. ಯು. ಕೆ. ಅವಧಾನಿ ಅವರು ಮೃತಪಟ್ಟಿದ್ದಾರೆ. ತುಮಕೂರಿನಲ್ಲಿ ತಮ್ಮ ಸಹೋದರಿ ಮನೆಯಲ್ಲಿ ಮಧ್ಯಾಹ್ನ ಊಟ ಮಾಡಿ ಮಲಗಿದವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಾ.ಯು.ಕೆ.ಅವಧಾನಿ ಅವರು ತಾಲೂಕಿನ ಖ್ಯಾತ ನೇತ್ರ ವೈದ್ಯರಾಗಿ ಪ್ರಸಿದ್ಧಿ ಹೊಂದಿದ್ದರು. ಡಾ. ಯು. ಕೆ. ಅವಧಾನಿ ಯವರ ನಿಧನದಿಂದ ತಾಲೂಕು ಖ್ಯಾತ ವೈದ್ಯರನ್ನು ಕಳೆದುಕೊಂಡoತಾಗಿದೆ. ಇವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button