ಮೀನುಗಾರಿಕೆಗೆ ತೆರಳಿದ ಯುವಕ ನದಿಯಲ್ಲಿ ಮುಳುಗಿ ಸಾವು

ಕುಮಟಾ: ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಯುವಕನೋರ್ವ ನದಿಯಲ್ಲಿ ಮುಳುಗಡೆಯಾಗಿ ಸಾವರನ್ನಪ್ಪಿರುವ ಘಟನೆ ತಾಲೂಕಿನ ಮಿರ್ಜಾನ್ ಸಮೀಪದ ಅಘನಾಶಿನಿ ನದಿಯಲ್ಲಿ ನಡೆದಿದೆ. ಈತ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾನೆ. ಈತ ಮುಳುಗಡೆಯಾಗುತ್ತಿರುವುದನ್ನ ಸ್ಥಳೀಯರು ಗಮನಿಸಿದರೂ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಕೃಷ್ಣ ಲಿಂಗಪ್ಪ ಅಂಬಿಗ (24) ಮೃತ ಯುವಕ.

ಯುವಕ ನದಿಯಲ್ಲಿ ಮುಳುಗಡೆಯಾದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮುಳುಗಡೆಯಾಗಿ ಮೃತಪಟ್ಟಿದ್ದ ಯುವಕ ಶವ ಮೇಲಕ್ಕೆತ್ತಿದ್ದಾರೆ. ಶುಕ್ರವಾರ ಮನೆಗೆ ಬಂದಿದ್ದ. ಈ ವೇಳೆ ಮನೆ ಸಮೀಪ ಇದ್ದ ನದಿಯಲ್ಲಿ ಮೀನುಗಾರಿಕೆಗೆ ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ. ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ದು:ಖದಲ್ಲಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version