ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಸಾವಿಗೆ ಶರಣಾದ ಮಹಿಳೆ

ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಹಿಳೆ, ಮನೆಯ ಅಡುಗೆ ಕೊನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗ್ರೆ ಮಾವಿನಕಟ್ಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಶೈಲಾ ನಾಗೇಶ ದೇವಾಡಿಗ (29) ಎಂದು ತಿಳಿದು ಬಂದಿದೆ. ಮಾವಿನಕಟ್ಟಾ ನಿವಾಸಿಯಾದ ನಾಗೇಶ ಎಂಬಾತನಿಗೆ ಮದುವೆಯಾಗಿದ್ದು, ಮದುವೆ ಆದಾಗಿನಿಂದ ಗಂಡನೊoದಿಗೆ ಒಳ್ಳೆಯ ರೀತಿಯಿಂದ ಸಂಸಾರ ಮಾಡಿಕೊಂಡಿದ್ದವಳಿಗೆ 7 ತಿಂಗಳ ಗಂಡು ಮಗು ಇದೆ.

ಆದರೆ ಸದ್ಯ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಡುಗೆ ಕೋಣೆಯ ಜಂತಿಗೆ ನೇಣುಕೊಂಡಿದ್ದಾಳೆ. ಇದನ್ನು ಗಮನಿಸಿದ ಮನೆಯವರು ಉರುಳು ಹಾಕಿಕೊಂಡ ಬಟ್ಟೆಯನ್ನು ಕತ್ತರಿಸಿ ಭಟ್ಕಳ, ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದಾಗ, ಸಾವನ್ನಪ್ಪಿರುವ ಖಚಿತ ಪಡಿಸಿದ್ದಾರೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version