ಸಾವಿನಲ್ಲೂ ಒಂದಾದ ದಂಪತಿ: ಒಟ್ಟಿಗೆ ಅಂತ್ಯಕ್ರಿಯೆ

ಹೊನ್ನಾವರ: ಹಲವು ದಶಕಗಳ  ಸಾರ್ಥಕ ದಾಂಪತ್ಯ ಜೀವನ ನಡೆಸಿದ ಪತಿ, ಪತ್ನಿ ಇಬ್ಬರೂ ಸಾವಿನಲ್ಲಿ ಜೊತೆಯಾದ ಅಪರೂಪದ ಘಟನೆ
ಹೊನ್ನಾವರ ತಾಲೂಕಿನ ತಲಗೋಡಿನಲ್ಲಿ ನಡೆದಿದೆ.

ತಲಗೋಡ ನಾಗ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಸುರೇಶ ಸುಬ್ರಾಯ ಮಹಾಲೆ(80) ಹಾಗೂ ಅವರ ಪತ್ನಿ (72) ವಿಜಯಾ ಸುರೇಶ ಮಹಾಲೆ  ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸ್ವಗ್ರಾಮದಲ್ಲಿ ಇಬ್ಬರ ಅಂತ್ಯಸಂಸ್ಕಾರವನ್ನು ಒಟ್ಟಿಗೆ ನಡೆಸಲಾಯಿತು.

ವಿಜಯಾ ಸುರೇಶ ಮಹಾಲೆ ಅವರು ಅನಾರೋಗ್ಯ ಕ್ಕೊಳಗಾಗಿ ಎರಡು ವಾರಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ಎರಡು ದಿನಗಳ ಹಿಂದೆ, ಪತಿ ಸುರೇಶ ಮಹಾಲೆ ಅವರು ಜ್ವರದಿಂದ ಬಳಲಿ, ಆದೇ ಆಸ್ಪತ್ರೆಗೆ ದಾಖಲಾಗಿತು. ಮೊದಲು ಸುರೇಶ ಮಹಾಲೆ ನಿಧನರಾದರು. ನಂತರ ಆ ಸುದ್ದಿ ಕೇಳುತ್ತಿದ್ದಂತೆ ಪತ್ನಿ ವಿಜಯಾ ಮಹಾಲೆಯವರು ಸಹ’ ಮೃತರಾದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಸುರೇಶ ಮಹಾಲೆ ಆವರು ನಾಗ ಚೌಡೇಶ್ವರಿ ದೇಗುಲದಲ್ಲಿ ದರ್ಶನ ಪಾತ್ರಿಯಾಗಿ ಹಲವು ವರ್ಷಗಳಿಂದ  ಕಾರ್ಯ ನಿರ್ವಸುತ್ತಾ  ಸಾಮಾಜ ಸೇವೆ ನಡೆಸುತ್ತಾ ಬಂದಿದ್ದರು. ಮೃತ ದಂಪತಿಗಳು ಇಬ್ಬರು ಪುತ್ರರನ್ನು, ಅಪಾರ ಸಂಖ್ಯೆಯ ಬಂದು ಮಿತ್ರರನ್ನು ಅಗಲಿದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version