ಇಬ್ಬರು ಮಕ್ಕಳನ್ನು ಬಸ್ ನಿಲ್ದಾಣದಲ್ಲೆ ಬಿಟ್ಟು ಸಮುದ್ರಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡ ತಾಯಿ: ಅಮ್ಮನ ನೆನಪಲ್ಲಿ ಮಕ್ಕಳ ರೋಧನ

ಕುಮಟಾ: ಮಕ್ಕಳನ್ನು ಬಸ್ ನಿಲ್ದಾಣದಲ್ಲೆ ಬಿಟ್ಟು ತಾಯಿಯು ಸುಮುದ್ರಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಮಟಾದಲ್ಲಿ ನಡೆದಿದೆ. ಹೌದು, ಹೊನ್ನಾವರ ತಾಲೂಕಿನ ಹಿರೇಬೈಲ್‌ದ ನಿವೇದಿತಾ ನಾಗರಾಜ ಭಂಡಾರಿ ಕುಮಟಾದ ವನ್ನಳ್ಳಿ ಬೀಚ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿವೇದಿತಾ ಭಂಡಾರಿ ತನ್ನ ಎರಡು ಮಕ್ಕಳ ಜೊತೆಗೆ ಕುಮಟಾದ ಪಿಕಪ್ ಬಸ್ ನಿಲ್ದಾಣಕ್ಕೆ ಆಗಮಿಸಿ, ಬಳಿಕ ತನ್ನಿಬ್ಬರು ಮಕ್ಕಳನ್ನು ಅಲ್ಲಿಯೇ ಬಿಟ್ಟು ತನ್ನ ಗೆಳತಿ ಮನೆಗೆ ಹೋಗಿ ಬರುವೆ ಎಂದು ಮಕ್ಕಳಿಗೆ ಹೇಳಿ ಹೋದವಳು ಮತ್ತೆ ಹಿಂದಿರುಗಿ ಬರದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕುಮಟಾದ ಹೆಡ್ ಬಂದರಿನಲ್ಲಿ ತಾನು ಚಲಾಯಿಸುತ್ತಿದ್ದ ಬೈಕ್‌ನಲ್ಲಿ ತನ್ನ ಮೊಬೈಲ್, ಬಂಗಾರವನ್ನು ಇಟ್ಟು ತೆರಳಿ, ಸಮುದ್ರದಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಿಬ್ಬರು ಅಮ್ಮನಿಗಾಗಿ ಹಂಬಲಿಸುತ್ತಿದ್ದು, ರೋಧನ ಮನಕುಲುಕುವಂತಿದೆ. ಈ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Exit mobile version