![](http://i0.wp.com/vismaya24x7.com/wp-content/uploads/2024/02/death-jpg.webp?fit=1280%2C720&ssl=1)
ಯಲ್ಲಾಪುರ: ನಾಗರಹಾವು ಕಚ್ಚಿ ಯುವತಿಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ಕುಂದರಗಿಯ ಮಾವಿನಕಟ್ಟಾದಲ್ಲಿ ನಡೆದಿದೆ. ತರಕಾರಿ ಮಾರಲು ತೆರಳುವ ವೇಳೆ ಈಕೆಗೆ ಹಾವು ಕಚ್ಚಿ ದುರಂತ ಸಂಭವಿಸಿದೆ. ಯಮುನಾ ಸುರೇಶ್ ಸಿದ್ಧಿ ಮೃತ ದುರ್ದೈವಿ ಮಹಿಳೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ