ಮನೆಯಂಗಳಕ್ಕೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ: ಕುಮಟಾ ಜನರಲ್ಲಿ ಆತಂಕ

ಕುಮಟಾ: ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಣ್ಣೆಮಠದ ಡಿ.ಆರ್ ಭಟ್ ಎನ್ನುವವರ ಮನೆಯಂಗಳಕ್ಕೆ ತಡ ರಾತ್ರಿ ನುಗ್ಗಿದ ಚಿರತೆಯು ಮನೆಯಲ್ಲಿ ಸಾಕಿದ್ದ ನಾಯಿ ಮರಿಯನ್ನು ಹೊತ್ತೊಯ್ದ ಘಟನೆ ನಡೆದಿದೆ. ಇತ್ತಿಚಿನ ಕೆಲ ದಿನಗಳಲ್ಲಿ ಕುಮಟಾ ತಾಲೂಕಿನಲ್ಲಿ ಚಿರತೆಯ ಕಾಟ ಅತಿಯಾಗಿ ಕಂಡು ಬರುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಕಂಗಾಲಾಗುವoತಾಗಿದೆ.

ಅದೇ ರೀತಿ ಬುಧವಾರ ತಡ ರಾತ್ರಿ ಹಣ್ಣೆ ಮಠದ ಡಿ.ಆರ್ ಭಟ್ ಎನ್ನುವವರ ಮನೆಯಂಗಳಕ್ಕೆ ಬಂದ ಚಿರತೆಯು ನಾಯಿ ಮರಿಯನ್ನು ಹೊತ್ತೊಯದ್ದಿದ್ದು, ಚಿರತೆಯು ಬಂದ ದೃಶ್ಯಾವಳಿ ಮನೆಯ ಸಿ.ಸಿ ಟಿ.ವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡಿಸಿರುವ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಪಂಜರವನ್ನು ಇಡುವ ವ್ಯವಸ್ಥೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Exit mobile version