Focus News
Trending

ಲಕ್ಷ್ಮೇಶ್ವರದ ಹಿರಿಯ ಜೀವ ಇನ್ನಿಲ್ಲ: ನಾಗವೇಣಿ ಗಜಾನನ ಶೆಟ್ಟಿ ವಿಧಿವಶ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ನಿವಾಸಿ ನಾಗವೇಣಿ ಗಜಾನನ ಶೆಟ್ಟಿ – ಕರ್ಕಿ (87 ) ಇವರು ವಯೋ ಸಹಜ ಖಾಯಿಲೆಯಿಂದ ಮಂಗಳವಾರ ಬೆಳಿಗ್ಗೆ ಸ್ವ ಗೃಹದಲ್ಲಿ ಕೊನೆಯುಸಿರೆಳೆದರು. ತಮ್ಮ ಸರಳ ನಡೆ ನುಡಿಗಳಿಂದ ಇವರು ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು. ಮೃತರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ.. ಕರ್ಕಿ ಶೆಟ್ಟಿ ಮನೆತನದ ಹಿರಿಯ ತಾಯಿ ದೈವಾಧೀನರಾಗಿರುವುದಕ್ಕೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button