Important
Trending

ಜವರಾಯನಂತೆ ಬಂದ ಮೀನು ಲಾರಿ : ಸ್ಕೂಟರ್ ಗೆ ಡಿಕ್ಕಿ : ಸ್ಥಳದಲ್ಲೇ ಮೃತಪಟ್ಟ ಸವಾರ

ಅಂಕೋಲಾ: ಮೀನು ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಕಾರವಾರದ ಸದಾಶಿವಗಡ ಬಳಿ ಸಂಭವಿಸಿದೆ. ಪ್ರಕಾಶ ಯಸೋ ನಾಯ್ಕ ಮೃತ ದುರ್ದೈವಿ. ಕುಮಟಾ ತಾಲೂಕಿನ ಮಿರ್ಜಾನ ನಿವಾಸಿ ಶಂಕರ ಪಟಗಾರ ಎಂಬಾತನೇ ಅಪಘಾತ ಪಡಿಸಿದ ಲಾರಿ ಚಾಲಕನಾಗಿದ್ದು, ಈತನು ಕಾರವಾರ ಕಡೆಯಿಂದ ಮಾಜಾಳಿ ಕಡೆಗೆ ತಮ್ಮ ಮೀನು ಲಾರಿಯನ್ನು ಅತಿ ವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿರುವ ಕುರಿತು ಪ್ರಕರಣ ದಾಖಲಾಗಿದೆ.

ಪಿ ಎಸ್ ಐ ಮಹಾಂತೇಶ ವಾಲ್ಮೀಕಿ ತನಿಖೆ ಮುಂದುವರಿಸಿದ್ದಾರೆ. ಹೆದ್ದಾರಿಯಲ್ಲಿ ಸಾಗುವ ಕೆಲ ಮೀನು ತುಂಬಿದ ವಾಹನಗಳ ಮಿತಿಮೀರಿದ ವೇಗ ಹಾಗೂ ಕೆಲವರು ಅಲ್ಲಲ್ಲಿ ದುರ್ನಾತ ಯುಕ್ತ ನೀರನ್ನು ಬಿಡುತ್ತ ಸಾಗುವುದಕ್ಕೆ ಸಂಬoಧಿತ ಇಲಾಖೆಗಳು ಕಡಿವಾಣ ಹಾಕಿ,ಸಾರ್ವಜನಿಕರ ಪ್ರಾಣ ರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಒತ್ತು ನೀಡಬೇಕೆನ್ನುವ ಮಾತು ಪ್ರಜ್ಞಾವಂತರಿoದ ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button