Important
Trending

ಕೆಲಸಕ್ಕೆ ಹೋಗುವುದಾಗಿ ಹೋದ ಯುವತಿ ನಾಪತ್ತೆ: ತಂದೆ ದಾಖಲಿಸಿದ ದೂರಿನಲ್ಲಿ ಏನಿದೆ?

ಯಲ್ಲಾಪುರ: ಯುವತಿಯೋರ್ವಳು ನಾಪತ್ತೆಯಾದ ಕುರಿತು ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಸಾಯಿಮನೆಯ ತೇಜಾ ರಾಮಕೃಷ್ಣ ಭಟ್ ನಾಪತ್ತೆಯಾದ ಯುವತಿ. ಹುಬ್ಬಳ್ಳಿಯ ಖಾಸಗಿ ಕಂಪನಿಯೊoದರಲ್ಲಿ ಉದ್ಯೋಗ ಮಾಡುತ್ತಿದ್ದ ಈಕೆ ಮನೆಯಿಂದ ತಾನು ಕಂಪನಿಯ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು ಮರಳಿ ಬಂದಿಲ್ಲ.

WhatsApp Group Join Now

ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗಿದ್ದು, ಕೆಲಸದ ಸ್ಥಳಕ್ಕೂ ಹೋಗದೇ, ಇತ್ತ ಮನೆಗೂ ಬಾರದೇ ಸಂಭAಧಿಕರ ಮನೆ ಅಥವಾ ತನ್ನ ಗೆಳತಿಯರ ಮನೆಗೂ ಹೋಗದೆ ಎಲ್ಲಿಯೋ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ರಾಮಕೃಷ್ಣ ಭಟ್ ಟವರು ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಪತ್ತೆಯಾದ ಯುವತಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯನ್ನು ಬಲ್ಲವಳಾಗಿದ್ದು, ತಮ್ಮ ಮಗಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ಪೊಲೀಸರ ಮೊರೆ ಹೋಗಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button