Important
Trending

ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಅಣ್ಣನ ಸಾವಿನಲ್ಲಿ ಅನುಮಾನವಿದೆ ಎಂದು ದೂರು ದಾಖಲಿಸಿದ ತಮ್ಮ

ಸಿದ್ದಾಪುರ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ದೇಹ ಪತ್ತೆಯಾದ ಘಟನೆ ಸಿದ್ದಾಪುರ ತಾಲೂಕಿನ ವಾಟಗಾರದಲ್ಲಿ ನಡೆದಿದೆ. ಗಣೇಶ ಮಾಬ್ಲೇಶ್ವರ ಹೆಗಡೆ ( 71) ಸಂಗೊಳ್ಳಿಮನೆ ಮೃತ ವ್ಯಕ್ತಿ. ಈತನು ಮನೆಯಲ್ಲಿ ಒಬ್ಬನೇ ವಾಸವಾಗಿದ್ದು ಹೆಂಡತಿ ಅನಾರೋಗ್ಯದಿಂದ ಮೃತ ಪಟ್ಟಿದ್ದು, ಮಗನು ಉಡುಪಿಯಲ್ಲಿ ವಾಸವಾಗಿದ್ದಾನೆ. ವಾಟಗಾರ ರಸ್ತೆಯಲ್ಲಿರುವ ಕುಂಟೆಹೊಳೆ ಬ್ರಿಡ್ಜ್ ಮೇಲೆ ಬೈಕ್ ಬಿದ್ದುಕೊಂಡಿದ್ದು, ಬೈಕ್ ಪಕ್ಕದಲ್ಲಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ದೇಹ ಬಿದ್ದುಕೊಂಡಿತ್ತು.

WhatsApp Group Join Now

ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಸಹ ಅಣ್ಣನ ಸಾವಿನಲ್ಲಿ ಬಲವಾದ ಸಂಶಯ ಕಂಡು ಬರುತ್ತಿದ್ದು, ಅ ದಿಶೆಯಲ್ಲಿ ತನಿಖೆ ಕೈಗೊಂಡು ಮರಣದ ನೈಜ ಕಾರಣವನ್ನು ಕಂಡು ಹಿಡಿದು, ಸೂಕ್ತ ಕಾನೂನಿನಡಿ ಕ್ರಮ ಕೈಗೊಳ್ಳಬೇಕೆಂದು ಮೃತನ ತಮ್ಮ ಶ್ರೀಧರ್ ಹೆಗಡೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button