![](http://i0.wp.com/vismaya24x7.com/wp-content/uploads/2024/03/fire-1.jpg?fit=1280%2C720&ssl=1)
ಸಿದ್ದಾಪುರ: ಕರಡದ ಹುಲ್ಲು ತುಂಬಿಕೊoಡು ಹೋಗುತ್ತಿದ್ದ ಪಿಕ್ ಅಪ್ ಗೆ ವಿದ್ಯುತ್ ತಂತಿ ತಗುಲಿ ವಾಹನ ಸಂಪೂರ್ಣ ಭಸ್ಮ ವಾಗಿ ಕರಡದ ಹುಲ್ಲು ಸುಟ್ಟು ನಾಶವಾದ ಘಟನೆ ತಾಲೂಕಿನ ಕ್ಯಾದಗಿ ಬಳಿ ನಡೆದಿದೆ. ವಾಹನದಲ್ಲಿ ಕರಡದ ಹುಲ್ಲು ತುಂಬಿಕೊAಡು ಹೋಗುತ್ತಿರುವಾಗ ಘಟನೆ ನಡೆದಿದೆ. ಕ್ಯಾದಗಿ ಕಡೆಯಿಂದ ಐನ್ ಕೈ ಕಡೆಗೆ ಹೋಗುತ್ತಿರುವಾಗ ಘಟನೆ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಅದೃಷ್ಟವಶಾತ್ ಘಟನೆಯಿಂದ ಯಾವುದೇ ಜೀವ ಹಾನಿ ಆಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ