ಕಿವಿ ಕೇಳಿಸದ ಸಮಸ್ಯೆ :ರೈಲು ಹಳಿ ದಾಟುತ್ತಿದ್ದಾಗ ನಡೆದ ಅವಘಡ: ಯಾವುದೋ ರೈಲು ಬಡಿದು, ಗಂಭೀರ ಗಾಯದೊಂದಿಗೆ ಮೃತಪಟ್ಟ ಮಹಿಳೆ

ಅಂಕೋಲಾ: ಕಿವುಡುತನ ಸಮಸ್ಯೆ ಇತ್ತು ಎನ್ನಲಾದ ಮಹಿಳೆ ಒರ್ವಳು,ರೈಲ್ವೆ ಹಳಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ಯಾವುದೋ ರೈಲೊಂದು ಬಡಿದು ಗಂಭೀರ ಗಾಯಗೊಂಡು, ನಂತರ ಮೃತ ಪಟ್ಟ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಮೊರಬಾ ಗ್ರಾಮದಲ್ಲಿ ನಡೆದಿದೆ.
ಮೊರಬಾ ಕುಮಟಾ ನಿವಾಸಿ ಸುಶೀಲಾ ಚಂದ್ರು ಹರಿಕಂತ್ರ(65) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ.

ಕಿವಿ ಕೇಳಿಸದ ಸಮಸ್ಯೆ ಹೊಂದಿರುವ ಈಕೆ ಮೊರಬಾದ ತನ್ನ ಮನೆಯಿಂದ ಪಕ್ಕದ ಕೇರಿಯ ತಮ್ಮನ ಮನೆಗೆ ಹೋಗಲು ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ,ರೈಲು ಬಂದ ಸಪ್ಪಳ ಅರಿವಿಗೆ ಬಾರದೋ ಏನೋ ಎಂಬಂತೆ, ಯಾವುದೋ ರೈಲು ಚಲಿಸುತ್ತಿರುವಾಗ ಇದೇ ಮಹಿಳೆಗೆ ಆಕಸ್ಮಿಕವಾಗಿ ಬಡಿದ ಪರಿಣಾಮ, ಭಾರೀ ಪ್ರಮಾಣದಲ್ಲಿ ಗಾಯಗೊಂಡು ಈಕೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version