ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೋದ ಮಹಿಳೆ ಕಾಣೆ: ಗುರುತು ಸಿಕ್ಕರೆ ಮಾಹಿತಿ ನೀಡಿ

ಕುಮಟಾ: ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೋದ ಮಹಿಳೆಯೋರ್ವಳು ದೇವಸ್ಥಾನಕ್ಕೂ ಹೋಗದೇ, ಮನೆಗೂ ಬಾರದೇ ಕಾಣೆಯಾದ ಘಟನೆ ಕುಮಟಾದಲ್ಲಿ ನಡೆದಿದೆ. ಕುಮಟಾ ತಾಲೂಕಿನ ವಿವೇಕನಗರದ ನಿವಾಸಿ ದೀಪಾ ವ್ಯದ್ಯ ಕಾಣೆಯಾದ ಮಹಿಳೆ. ಮೇ 18 ರ ಬೆಳಿಗ್ಗೆ 10 ಘಂಟೆಗೆ ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಕಾಣೆಯಾದ ದೀಪಾ ವ್ಯದ್ಯ ಇವರನ್ನು ಹುಡುಕಿ ಕೊಡಬೇಕಾಗಿ ಕೋರಿ ಕಾಣೆಯಾದ ಮಹಿಳೆಯ ಅಕ್ಕ ಭಾನು ಗುನಗಾ ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Exit mobile version