ಮನೆಯಿಂದ ಹೋದ ವಿವಾಹಿತ ನಾಪತ್ತೆ: ಪತಿಯನ್ನು ಹುಡುಕಿಕೊಡುವಂತೆ ಪತ್ನಿ ದೂರು

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯಚವತ್ತಿ-ಬಾಳೆಹದ್ದ ಗ್ರಾಮದ ವ್ಯಕ್ತಿಯೋರ್ವ ಕಾಣೆಯಾಗಿದ್ದು ಆತನ ಪತ್ನಿ ತನ್ನ ಪತಿಯನ್ನು ಹುಡುಕಿಕೊಡುವಂತೆ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಳೆಹದ್ದ ನಿವಾಸಿ ಶ್ರೀಧರ ರಾಮಾ ಮೊಗೇರ ನಾಪತ್ತೆಯಾದ ವ್ಯಕ್ತಿಯಾಗಿದ್ದಾನೆ. ಈತ ಜುಲೈ 8ರಂದು ಸಂಜೆ 6 ಗಂಟೆಗೆ ತಮ್ಮ ಮನೆಯಿಂದ ಹೊರಗಡೆ ಹೋದವನು ಮನೆಗೆ ಮರಳಿ ಬಂದಿಲ್ಲವೆAದು ಪತ್ನಿ ಸೌಭಾಗ್ಯ ಶ್ರೀಧರ ಮೊಗೇರ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಯಲ್ಲಾಪುರ ಠಾಣೆಯ ಪಿಎಸ್‌ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version