ಮತ್ತೆ ಜೋರಾದ ಮಳೆ: ಕೆಲವು ಕಡೆಗಳಲ್ಲಿ ಗುಡ್ಡ ಕುಸಿತ

ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದ್ದು ಹೊನ್ನಾವರದ ಕೆಲವು ಕಡೆಗಳಲ್ಲಿ ಗುಡ್ಡ ಕುಸಿಯುತ್ತಿದೆ. ಇನ್ನೂ ಕೆಲವೆಡೆ ತಗ್ಗುಪ್ರದೇಶಗಳಿಗೆ ನೀರು ತುಂಬಿಕೊoಡಿದೆ., ಹೊನ್ನಾವರ- ಬೆಂಗಳೂರಿನ ಹೆದ್ದಾರಿಯಲ್ಲಿ ವರ್ನಕೇರಿಯಲ್ಲಿ ಗುಡ್ಡ ಕುಸಿತಗೊಂಡಿದ್ದು ಮಣ್ಣನ್ನು ಜೆಸಿಬಿ ಮುಖಾಂತರ ತೆರವು ಮಾಡಲಾಗುತ್ತಿದೆ.

ವರ್ನಕೇರಿಯ ಇನ್ನೊಂದು ಸ್ಥಳದಲ್ಲಿ ಮನೆಯ ಮೇಲೆ ಮರ ಬಿದ್ದಿದೆ. ಅಲ್ಲದೆ, ಇದರ ಜೊತೆಗೆ ಗುಡ್ಡವೂ ಕುಸಿದಿದ್ದು, ಗುಡ್ಡ ಕುಸಿತಕ್ಕೆ ಮನೆಯ ಚಾವಡಿ ಮುರಿದು ಹೋಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಯಾವುದೇ ಸ್ಥಳೀಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿಲ್ಲ ಎಂದು ಮನೆಯ ಮಾಲೀಕರು ತಮ್ಮ ಅಳಲನ್ನು ಹಂಚಿಕೊoಡರು. ಇನ್ನೂ ಪಟ್ಟಣದ ಪ್ರಭಾತನಗರದಲ್ಲಿರುವ ಹೋಲಿ ರೋಸರಿ ಕಾನ್ವೆಂಟ್ ಸ್ಕೂಲ್ ನ ಮೈದಾನದಲ್ಲಿ ನೀರು ತುಂಬಿರುವ ದೃಶ್ಯಕಂಡುಬoತು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version