ತಾ.ಪಂ ನಿವೃತ್ತ ಜವಾನ ಥಾಕು ಲಕ್ಷ್ಮೇಶ್ವರ ವಿಧಿವಶ

ಅಂಕೋಲಾ : ಪಟ್ಟಣದ ಲಕ್ಷ್ಮೇಶ್ವರ ನಿವಾಸಿ ಥಾಕು ಬಲಿಯಾ ಲಕ್ಷ್ಮೇಶ್ವರ (73 ) ನಿಧನರಾಗಿದ್ದಾರೆ. ಇತ್ತೀಚೆಗೆ ಅವರನ್ನು ಕಾಡಿದ್ದ ಅನಾರೋಗ್ಯದಿಂದ,ಹಾಸಿಗೆ ಹಿಡಿದಿದ್ದರು. ಆರಂಭದಲ್ಲಿ ಭೂ ದಾಖಲೆಗಳ ವಿಭಾಗ (ಸರ್ವೆ ) ಆಫೀಸ್ ನಲ್ಲಿ ಸೇವೆ ಸಲ್ಲಿಸಿದ್ದ ಇವರು,ತದ ನಂತರ ತಾಲೂಕಾ ಪಂಚಾಯತ ಅಂಕೋಲಾದ ಜವಾನರಾಗಿ, ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ತಮ್ಮ ಸೇವಾ ಅವಧಿಯಲ್ಲಿ ತಮ್ಮ ಸರಳ ನಡೆ ನುಡಿಗಳಿಂದ ಗುರುತಿಸಿಕೊಂಡಿದ್ದರು.ಅಪಾರ ದೈವ ಭಕ್ತಿ ಹೊಂದಿದ್ದ ಇವರು ತಮ್ಮ ಆಪ್ತರನ್ನು ಒಗ್ಗೂಡಿಸಿ,ತಾವೇ ಮುಂದೆ ನಿಂತು ಹತ್ತಾರು ತೀರ್ಥ ಕ್ಷೇತ್ರಗಳಿಗೆ ಯಾತ್ರೆ ಹಮ್ಮಿಕೊಳ್ಳುತ್ತಿದ್ದರು.ತಮ್ಮ ಸಹೋದರರು ಮತ್ತು ಕುಟುಂಬ ವರ್ಗದೊಂದಿಗೆ ಗಣಪನನ್ನು ಪ್ರತಿಷ್ಠಾಪಿಸಿ,ಅತ್ಯಂತ ವಿಜ್ರಮಣೆಯಿಂದ ಪೂಜಿಸಿ, ಚೌತಿಯನ್ನು ಸಂಭ್ರಮಿಸುತ್ತಿದ್ದರು.ಸಮಾಜಮುಖಿ ವ್ಯಕ್ತಿತ್ವದ ಇವರು ತಮ್ಮ ಊರಿನ ಹಾಗೂ ಇತರೆಡೆಯ ಹತ್ತಾರು ಕಾರ್ಯಕ್ರಮಗಳಲ್ಲಿ,ಎಲ್ಲ ಜಾತಿ ಜನಾಂಗದವರೊಂದಿಗೆ ಕೂಡಿ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದರು.

ಇವರ ನಿಧನಕ್ಕೆ ಜಿಲ್ಲೆಯ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸತೀಶ ಸೈಲ್ , ತಾ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಆರ್ ಟಿ ಮಿರಾಶಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version