ಮನೆ ಮೇಲೆ ಆಲದ ಮರಬಿದ್ದು, ನಾಲ್ವರಿಗೆ ಗಾಯ: ಮರಬಿದ್ದು ಶಾಲೆಯೊಂದರ ಕಂಪ್ಯೂಟರ್ ಕೋಣೆ ಜಖಂ

ಹೊನ್ನಾವರ: ತಾಲೂಕಿನಲ್ಲಿ ಗಾಳಿ ಮಳೆಗೆ ಅಪಾರ ಹಾನಿ ಮಾಡಿದೆ. ಹಳದೀಪುರ ಗ್ರಾಮದಲ್ಲಿ ಜೋರಾದ ಗಾಳಿ ಮಳೆಗೆ ಮನೆ ಮೇಲೆ ಬೃಹತ್ ಆಲದ ಮರಬಿದ್ದಿದ್ದು, ನಾಲ್ಕು ಜನರಿಗೆ ಗಾಯವಾಗಿದೆ. ವಿಷ್ಣು ಕೃಷ್ಣ ಗೌಡ, ನಿಪುಲಾ ಕೃಷ್ಣ ಗೌಡ , ಕೃಷ್ಣ ದೇವು ಗೌಡ, ಮಾದೇವಿ ಕೃಷ್ಣ ಗೌಡ ಗಾಯಗೊಂಡವರು ಎಂದು ತಿಳಿದುಬಂದಿದೆ. ಇದೇ ವೇಳೆ ಜೋರಾದ ಗಾಳಿ ಮಳೆಗೆ ಖರ್ವಾ ಗ್ರಾಮದ ಕಡಗೇರಿಯಲ್ಲಿ ತೋಟದ 15 ಅಡಿಕೆ ಮರ ಹಾಗೂ 2 ತೆಂಗಿನ ಮರಗಳು ಮುರಿದುಬಿದ್ದಿದೆ. ಕುದ್ರಿಗಿಯಲ್ಲೂ ಮನೆಯ ಮೇಲೆ ತೆಂಗಿನ ಮರಬಿದ್ದು, ಹಾನಿಯಾಗಿದೆ. ಪಾವಿನಕುರ್ವಾದಲ್ಲೂ ತೆಂಗಿನಮರ ಮನೆಮೇಲೆ ಬಿದ್ದಿದೆ. ಬೇರೋಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕೋಣೆಯಲ್ಲಿ ಮರ ಬಿದ್ದು ಶಾಲೆಯ ಕೋಣೆ ಹಾನಿಯಾಗಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version