ಮನೆಯ ಶೆಡ್‌ನಲ್ಲಿದ್ದ 3 ಕ್ವಿಂಟಲ್ ಅಡಿಕೆ ಕಳ್ಳತನ

ಸಿದ್ದಾಪುರ: ಮನೆಯ ಶೆಡ್ ನಲ್ಲಿ ಇಟ್ಟಿದ್ದ ಸಿಪ್ಪೆ ಗೋಟು ಅಡಿಕೆ ಕಳ್ಳತನವಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. 8 ಚೀಲದಲ್ಲಿದ್ದ ಸುಮಾರು 3 ಕ್ವಿಂಟಲ್ 20 ಕೆ.ಜಿ ಅಡಿಕೆ ಕಳ್ಳತನವಾಗಿದೆ. ಕಳ್ಳತನವಾದ ಅಡಿಕೆಯನ್ನ ಹಾಗೂ ಕಳ್ಳರನ್ನು ಪತ್ತೆಹಚ್ಚುವಂತೆ ಸಿದ್ದಾಪುರ ಠಾಣೆಯಲ್ಲಿ ವಿಠ್ಠಲ ಮೈಲಪ್ಪ ನಾಯ್ಕ ಅವರಗುಪ್ಪ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತೀಚಿಗೆ ತಾಲೂಕಿನ ಕಡೆಕೇರಿಯಲ್ಲೂ ಸಹ ಅಡಿಕೆ ಕಳ್ಳತನವಾಗಿತ್ತು. ತಾಲೂಕಿನಲ್ಲಿ ಅಡಿಕೆ ಕಳ್ಳತನ ಹೆಚ್ಚುತ್ತಿರುವ ಬಗ್ಗೆ ಪ್ರಕರಣಗಳು ದಾಖಲಾಗುತ್ತಿರುವುದು ರೈತ ವಲಯದಲ್ಲಿ ಆತಂಕ ಎದುರಾಗಿದೆ. ಕಳ್ಳರನ್ನು ಹಿಡಿದು ಶಿಕ್ಷೆ ವಿಧಿಸಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ರೈತರು ಒತ್ತಾಯಿಸುತ್ತಿರುವುದು ಕೇಳಿ ಬಂದಿದೆ .

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version