ಅಕ್ರಮವಾಗಿ ಜಿಂಕೆ ಮತ್ತು ಕಾಡುಕೋಣದ ಕೊಂಬು ದಾಸ್ತಾನು: ಆರೋಪಿ ಬಂಧನ

ದಾoಡೇಲಿ: ಅಕ್ರಮವಾಗಿ ವನ್ಯಜೀವಿಗಳ ಅಂಗಾoಗಗಳನ್ನು ದಾಸ್ತಾನಿಟ್ಟಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸಿದ ಘಟನೆ ದಾಂಡೇಲಿಯ ಗಾಂಧಿನಗರದಲ್ಲಿ ನಡೆದಿದೆ. ಗಾಂಧಿನಗರದ ನಿವಾಸಿ ಪಕ್ರುಸಾಬ ಶೇಖ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಈತನು ಗಾಂಧಿನಗರದ ತನ್ನ ಮನೆಯಲ್ಲಿ ವನ್ಯಜೀವಿಗಳ ಅಂಗಾoಗಗಳನ್ನು ಅಕ್ರಮವಾಗಿ ದಾಸ್ತಾನಿಟ್ಟಿದ್ದ ಎನ್ನಲಾಗಿದೆ.

ಗಂಗಾವಳಿ ನದಿಯಲ್ಲಿ ವಾಹನ ಪತ್ತೆ?  ಶೋಧ ಕಾರ್ಯಾಚರಣೆಗೆ ಮಹತ್ವಪೂರ್ಣ ತಿರುವು: ಲಾರಿಯಲ್ಲೇ ಇದ್ಯಾ ಅರ್ಜುನ್ ದೇಹ?

ಖಚಿತ ಮಾಹಿತಿಯಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಸಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಚೌವ್ಹಾಣ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಅಕ್ರಮವಾಗಿ ದಾಸ್ತಾನಿಟ್ಟ ವನ್ಯಜೀವಿಗಳ ಅಂಗಾoಗಗಳನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version