ಬೋನ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಚಿಕಿತ್ಸೆಗೆ ನೆರವಾದ ಪೊಲೀಸರು

ಶಿರಸಿ: ತಾಲೂಕಿನ ಮಾರಿಗುಡಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ರೇವತಿ ಮಂಜುನಾಥ ನಾಯ್ಕ, ಬೋನ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ತಾಲೂಕಿನಾದ್ಯಂತ ಸಹಾಯ ಹಸ್ತ ಚಾಚಿದ್ದರು. ಅದರಂತೆ ಶಿರಸಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಉದಾರತೆ ಮತ್ತು ಮಾನವೀಯತೆ ಮೆರೆದಿದ್ದಾರೆ. ತಮ್ಮ ಇಲಾಖೆಯ ವತಿಯಿಂದ ಒಟ್ಟು 30 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಿ ಸ್ವತಃ ನಗರ ಠಾಣೆ ಪಿಎಸ್‌ಐ ನಾಗಪ್ಪ ಬಿ , ಮಹಂತಪ್ಪ ಕುಂಬಾರ್ ಹಾಗೂ ಸಿಬ್ಬಂದಿಗಳು, ರೇವತಿ ಮಂಜುನಾಥ್ ನಾಯ್ಕ ಅವರು ಮನೆಗೆ ತೆರಳಿ ಹಣ್ಣು ಹಂಪಲು ಜೊತೆಗೆ ಸಹಾಯಧನವನ್ನು ನೀಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version