ನಾನೇನು ದನ ಕಾಯಲು ಇಲ್ಲಿಗೆ ಬಂದಿದ್ದೇನಾ? ದೇಶಪಾಂಡೆ ಗರಂ ಆಗಿದ್ದೇಕೆ?

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಹಶೀಲ್ದಾರ್ ಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ದೇಶಪಾಂಡೆ ಅವರು ಮುಂಡಗೋಡ ತಾಲೂಕಿನ ಪ್ರವಾಸಿ ಮಂದಿರಕ್ಕೆ ತೆರಳಿ ಜನರ ಬಳಿ ಅಹವಾಲುಗಳನ್ನು ಸ್ವೀಕರಿಸಲು ಮುಂದಾಗಿದ್ದರು, ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ತಮ್ಮ ಅಳಲನ್ನು ದೇಶಪಾಂಡೆಯವರ ಬಳಿ ತೋಡಿಕೊಳ್ಳಲು ಆಗಮಿಸಿದ್ದರು.

ರಾಜ್ಯಮಟ್ಟದ ಚದುರಂಗ ಸ್ಪರ್ಧೆ: ಸಿಂಚನಾ ಭಟ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಆಗಮಿಸಿರಲಿಲ್ಲ, ಇದರಿಂದ ಕುಪಿತಗೊಂಡ ದೇಶಪಾಂಡೆಯವರು ತಹಶೀಲ್ದಾರ್ ಗೆ ಕರೆ ಮಾಡಿ ನಾನೇನು ದನ ಕಾಯಲು ಇಲ್ಲಿಗೆ ಬಂದಿದ್ದೇನಾ,? ಜನರ ಸಮಸ್ಯೆಯನ್ನು ಬಗೆಹರೆಸುವುದು ಬಿಟ್ಟು ಎಲ್ಲಿದ್ದೀಯ ನೀನು, ನಿನ್ನ ಮೇಲೆ ಕಂದಾಯ ಸಚಿವರಿಗೆ ದೂರು ಕೊಡುತ್ತೇನೆ ಎಂದು ಗರಂ ಆದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version