ಪೌರಕಾರ್ಮಿಕ ಸಿಬ್ಬಂದಿ ಅಕಾಲಿಕ ನಿಧನ

ಅಂಕೋಲಾ : ಪುರಸಭೆಯ ಪೌರ ಕಾರ್ಮಿಕ ಸಿಬ್ಬಂದಿ ರಾಜು ಕೊರಾವ ಅಕ್ಟೋಬರ್ 25 ರಂದುಅಕಾಲಿಕವಾಗಿ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರಾದರೂ , ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಅಂಕೋಲಾ ಪುರಸಭೆಯಲ್ಲಿ ಪೌರಕಾರ್ಮಿಕ ಸಿಬ್ಬಂದಿಯಾಗಿದ್ದ ಇವರು ಉತ್ತಮ ಸೇವೆ ನೀಡುತ್ತಾ ,ತನ್ನ ನಗು ಮೊಗ ಹಾಗೂ ಹಾಸ್ಯ ಪ್ರವೃತ್ತಿ ಮೂಲಕ ಬಹುತೇಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು.

ಎಟಿಎಂ ಕಾರ್ಡ್ ಬದಲಾಯಿಸಿ ವಂಚನೆ : ದಾಖಲಾಯಿತು ಮತ್ತೊಂದು ಪೊಲೀಸ್ ಪ್ರಕರಣ

ಇವರ ಅಕಾಲಿಕ ನಿಧನದ ಸುದ್ದಿ ಕೇಳಿ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ , ಸದಸ್ಯರಾದ ರೇಖಾ ಗಾಂವಕರ , ವಿಶ್ವನಾಥ ನಾಯ್ಕ ಮತ್ತಿತರರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಶನಿವಾರ ಕೋಟೆವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರ ಕುಟುಂಬಸ್ಥರು ಬಂಧು ಬಾಂಧವರು , ಪೌರ ಕಾರ್ಮಿಕ ಸಿಬ್ಬಂದಿಗಳು ಸೇರಿದಂತೆ ನೂರಾರು ಜನರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version