ಲಾರಿಗೆ ಅಪಘಾತಪಡಿಸಿಕೊಂಡ ಕಾರು : ಚಾಲಕ ಮತ್ತು ಆತನ ಪತ್ನಿ ಪ್ರಾಣಪಾಯದಿಂದ ಪಾರು

ಅಂಕೋಲಾ : ಕಾರೊಂದು ಲಾರಿಗೆ ಡಿಕ್ಕಿ ಪಡಿಸಿಕೊಂಡ ಘಟನೆ ಅಂಕೋಲಾ ತಾಲೂಕಿನ ರಾ . ಹೆ 66 ರ ನೀಲಂಪುರ್ ಕ್ರಾಸ್ ಬಳಿ ಸಂಭವಿಸಿದೆ. ತಮಿಳುನಾಡಿನ ಥೂಥುಕ್ಕುಡಿ ಮೂಲದ ಲಾರಿ ಚಾಲಕ ಆರು ಮುಗಮ್ ಆದಿ ಲಿಂಗಮ್ ರೆಡ್ಡಿಯಾರ ,ಪೊಲೀಸ್ ಠಾಣೆಗೆ ಹಾಜರಾಗಿ ಕಾರು ಚಾಲಕನ ವಿರುದ್ಧ ದೂರು ನೀಡಿದ್ದಾರೆ.

ಬಸ್ ನಿಲ್ದಾಣದಲ್ಲಿ ಹೆಚ್ಚುತ್ತಿದೆ ಪಿಕ್ ಪಾಕೆಟ್? ಅತಿಥಿ ಉಪನ್ಯಾಸಕನ ಪರ್ಸ್ ನಾಪತ್ತೆ !

ದೂರಿನಲ್ಲಿ ತಿಳಿಸಿದಂತೆ ಅಕ್ಟೋಬರ್ 26 ರ ಬೆಳಗಿನ ಜಾವ 4.30 ಗಂಟೆಯ ಸುಮಾರಿಗೆ ಕಾರ್ ಚಾಲಕನಾದ ಕೇರಳ ಕಾಸರಗೋಡ ಮೂಲದ ಡಿಕೆನ್ಸ್ ಎಮ್ ಪಿ ಎನ್ನುವಾತ ,ತಾನು ಚಲಾಯಿಸುತ್ತಿದ್ದ ಕಾರನ್ನು ಅಂಕೋಲಾ ಬಾಳೆಗುಳಿ ಕಡೆಯಿಂದ ಕುಮಟಾ ಕಡೆಗೆ ರಾ.ಹೆ 66 ರ ಮೇಲೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು , ಅಂಕೋಲಾ ತಾಲೂಕ ನೀಲಂಪುರ್ ಕ್ರಾಸ್ ಹತ್ತಿರ ತನ್ನ ಕಾರನ್ನು ಒಮ್ಮೆಲೆ ರಸ್ತೆಯ ಬಲಕ್ಕೆ ಚಲಾಯಿಸಿ ,ಎದುರಿನಿಂದ ಅಂದರೆ ಕುಮಟ ಕಡೆಯಿಂದ ಅಂಕೋಲಾ ಕಡೆಗೆ ತಾನು ಚಲಾಯಿಸಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು , ಅಪಘಾತದಿಂದ ಎರಡು ವಾಹನ ಜಖಂ ಆಗಲು ಕಾರಣನಾಗಿದ್ದಾನೆ ಎಂದು ದೂರಿದ್ದಾರೆ.

ಅಪಘಾತದಲ್ಲಿ ಕಾರ ಚಾಲಕ ಮತ್ತು ಆತನ ಪತ್ನಿ ಗಾಯಗೊಂಡಿದ್ದಾರೆ . ರಾಷ್ಟ್ರೀಯ ಹೆದ್ದಾರಿ ಹಾಗೂ ಅಂಕೋಲಾ ಕಾರವಾರ ಸೇರುವ ಮುಖ್ಯ ರಸ್ತೆ ನೀಲಂಪುರ ಕ್ರಾಸ್ ಅಥವಾ ಅಂಬೇಡ್ಕರ್ ವೃತ್ತ ಎಂದು ಕರೆಸಿಕೊಳ್ಳುತ್ತಿದ್ದು ,ನಾನ ಕಾರಣಗಳಿಂದ ಈ ಪ್ರದೇಶ ಅಪಾಯಕಾರಿ ಸ್ಥಳವಾಗಿದೆ. ದಾರಿ ಹೋಕರ ಮತ್ತು ಸಂಚರಿಸುವ ವಾಹನಗಳ ಸುರಕ್ಷತೆ ದೃಷ್ಟಿಯಿಂದ ಈ ಭಾಗದಲ್ಲಿ ವ್ಯವಸ್ಥಿತ ಸರ್ಕಲ್ ನಿರ್ಮಾಣವಾಗಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ರಸ್ತೆ ಅಪಘಾತದ ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version