ಕುಮಟಾದಲ್ಲಿ 10, ಹೊನ್ನಾವರದಲ್ಲಿ 10 ಕೇಸ್ ದಾಖಲು

ಹೊನ್ನಾವರ ತಾಲೂಕಿನಲ್ಲಿ ಒಂದು ಸಾವು
ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,518ಕ್ಕೆ ಏರಿಕೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 10 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ಚಿತ್ರಗಿ, ದಿವಳ್ಳಿ, ಮಾವಳ್ಳಿ, ಬಸ್ತಿಪೇಟೆ, ಬೆಟ್ಕುಳಿ, ಗೋಕರ್ಣ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಬೆಟ್ಕುಳಿಯ 43 ವರ್ಷದ ಪುರುಷ, ಗೋಕರ್ಣದ 55 ವರ್ಷದ ಮಹಿಳೆ, ಬಸ್ತಿಪೇಟೆಯ 52 ವರ್ಷದ ಪುರುಷ, ಕುಮಟಾದ 27 ವರ್ಷದ ಯುವಕ, 74 ವರ್ಷದ ವೃದ್ಧ, 50 ವರ್ಷದ ಪುರುಷ, ಚಿತ್ರಗಿಯ 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಮಾವಳ್ಳಿಯ 63 ವರ್ಷದ ಪುರುಷ, 70 ವರ್ಷದ ವೃದ್ಧ, ದಿವಳ್ಳಿಯ 78 ವರ್ಷದ ವೃದ್ಧೆಗೂ ಪಾಸಿಟಿವ್ ಬಂದಿದೆ. ಇಂದು 10 ಪ್ರಕರಣ ದಾಖಲಾದ ಬೆನ್ನಲ್ಲೇ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1518ಕ್ಕೆ ಏರಿಕೆಯಾಗಿದೆ.

ಹೊನ್ನಾವರ ತಾಲೂಕಿನಲ್ಲಿ ಒಂದು ಸಾವು:

ಹೊನ್ನಾವರ: ತಾಲೂಕಿನಲ್ಲಿ ಇಂದು 10 ಜನರಲ್ಲಿ ಕರೊನಾ ಪಾಸಿಟಿವ್ ಕಂಡುಬoದಿದೆ. ಮಂಕಿಯ 56 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಐದಾರು ದಿನದ ಹಿಂದೆ ಕರೊನಾ ದೃಢಪಟ್ಟಿತ್ತು ತಕ್ಷಣ ಇವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇವರು ಡಯಾಬಿಟಿಸ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಇಂದು ವರದಿಯಾದ 10 ಪ್ರಕರಣಗಳಲ್ಲಿ ಪಟ್ಟಣ ವ್ಯಾಪ್ತಿ ಉದ್ಯಮನಗರ ರಾಯಲಕೇರಿ ಬಾಂದೆಹಳ್ಳ ಭಾಗದಲ್ಲಿ ತಲಾ ಒಂದೂoದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಗ್ರಾಮೀಣ ಭಾಗವಾದ ಕಾಸರಕೋಡ 2, ಸಾಲಕೋಡ 2, ಕವಲಕ್ಕಿ-ಮಾಳಕೋಡ-ಮೋಳ್ಕೋಡಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಹೊನ್ನಾವರ ಪಟ್ಟಣದ ಉದ್ಯಮ ನಗರದ 57 ವರ್ಷದ ಪುರುಷ, ರಾಯಲಕೇರಿಯ 58 ವರ್ಷದ ಪುರುಷ, ಬಾಂದೇಹಳ್ಳದ 32 ವರ್ಷದ ಯುವಕ, ಗ್ರಾಮೀಣ ಭಾಗವಾದ ಸಾಲಕೋಡಿನ 40 ವರ್ಷದ ಪುರುಷ, 51 ವರ್ಷದ ಮಹಿಳೆ, ಕಾಸರಕೋಡಿನ 65 ವರ್ಷದ ಮಹಿಳೆ, 69 ವರ್ಷದ ಪುರುಷ, ಮೋಳ್ಕೋಡಿನ 27 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ.

ಕವಲಕ್ಕಿಯ 52 ವರ್ಷದ ಪುರುಷ, ಮಾಳಕೋಡಿನ 55 ವರ್ಷದ ಮಹಿಳೆ ಸೇರಿದಂತೆ ಒಟ್ಟು 10 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ತಾಲೂಕಾ ಆಸ್ಪತ್ರೆಯಿಂದ ನಾಲ್ವರು ಡಿಸ್ಚಾರ್ಜ್ ಆಗಿದ್ದು, 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version