Focus News
Trending

ಗೋಕರ್ಣದಲ್ಲಿ ಕದಿರು ಹರಣೋತ್ಸವ: ಭಕ್ತಾದಿಗಳಲ್ಲಿ ವಿನಂತಿ

ಗೋಕರ್ಣ: ರಾಘವೇಶ್ವರ ಶ್ರೀಗಳ ಮಾರ್ಗದರ್ಶನದಂತೆ ಶ್ರೀಕ್ಷೇತ್ರ ಗೋಕರ್ಣ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಶಾರ್ವರಿ ಸಂವತ್ಸರದ ಕದಿರು ಹರಣೋತ್ಸವವು ಅಕ್ಟೋಬರ್ 19 ರಂದು ನಡೆಯಲಿದ. ಕೋವಿಡ್ ಸಾಂಕ್ರಾಮಿಕ ರೋಗದ ಕುರಿತು ಮುನ್ನೆಚ್ಚರಿಕೆಯ ಕ್ರಮವಾಗಿ ಸರಕಾರ ನೀಡಿದ ಮಾರ್ಗಸೂಚಿಯಂತೆ ಉತ್ಸವವನ್ನು ದೇವಾಲಯದ ಆಗಮಿಕರು / ತಂತ್ರಿಗಳು ಮತ್ತು ಉಪಾಧಿವಂತರೊಡನೆ ಸಮಾಲೋಚನೆ ಮಾಡಿ ಸಾಂಕೇತಿಕವಾಗಿ ಆಚರಿಸಲಾಗುವುದು.

ದೇವಾಲಯದಲ್ಲಿ ಅಂದು ಬೆಳಿಗ್ಗೆ 9 ಘಂಟೆಗೆ ಧಾನ್ಯಲಕ್ಷ್ಮಿ ಮತ್ತು ಜಗದೀಶ್ವರನ, ಶ್ರೀಕೃಷ್ಣ ಪರಮಾತ್ಮನನ್ನು ಪೂಜಿಸಿ ರೈತ ಜನಸಮುದಾಯಕ್ಕೆ ಸನ್ಮಂಗಲವನ್ನುAಟು ಮಾಡುವಂತೆ ಪ್ರಾರ್ಥನೆ ಮಾಡಿಕೊಳ್ಳಲಾಗುವುದು. ಈ ವೇಳೆಗೆ ಸಂಸ್ಥಾನ ಮಹಾಬಲೇಶ್ವರ ದೇವಾಲಯಕ್ಕೆ ಭಕ್ತಾದಿಗಳು ದೇವಾಲಯದ ನಿಯಮಗಳಂತೆ ಆಗಮಿಸಿ ಹಣ್ಣು ಕಾಯಿ ಸಮರ್ಪಿಸಿ ಪ್ರಸಾದ ಪಡೆದುಕೊಳ್ಳಬಹುದೆಂದು ದೇವಾಲಯದ ಆಡಳಿತಾಧಿಕಾರಿಗಳು ಮತ್ತು ಕ್ಷೇತ್ರದ ಉಪಾಧಿವಂತರು ಜನತೆಯಲ್ಲಿ ವಿನಂತಿಸಿಕೊoಡಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button