ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 46 ಕರೊನಾ ಕಸ್

24 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಇಂದು ಯಾವುದೇ ಸಾವು ಇಂದು ದಾಖಲಾಗಿಲ್ಲ

ಕುಮಟಾ: ತಾಲೂಕಿನಲ್ಲಿ ಇಂದು ಐವರದಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ತಾಲೂಕಿನ ಮೂರೂರಿನಲ್ಲಿ 2, ಹೆರವಟ್ಟಾ, ವನ್ನಳ್ಳಿ, ಹಾಗೂ ಕುಮಟಾದ ಎಪಿಎಮ್‌ಸಿ ಬಳಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.

ಮೂರೂರಿನ 46 ವರ್ಷದ ಪುರುಷ, 19 ವರ್ಷದ ಯುವಕ, ವನ್ನಳ್ಳಿಯ 39 ವರ್ಷದ ಪುರುಷ, ಹೆರವಟ್ಟಾದ 45 ವರ್ಷದ ಪುರುಷ, ಕುಮಟಾದ ಎಪಿಎಮ್‌ಸಿಯ 34 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 5 ಪ್ರಕರಣಗಳು ಸೇರಿದಂತೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,723 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಮೂವರಿಗೆ ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು ಮೂವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಎಲ್ಲಾ ಪ್ರಕರಣಗಳು ಗ್ರಾಮೀಣ ಭಾಗದಲ್ಲಿಯೇ ದೃಢಪಟ್ಟಿದೆ. ಗುಣವಂತೆ- ಜಲವಳ್ಳಕರ್ಕಿ-ತಲಗೋಡ ಭಾಗದಲ್ಲಿ ಸೋಂಕು ಪತ್ತೆಯಾಗಿದೆ.

ಗುಣವಂತೆಯ 53 ವರ್ಷದ ಪುರುಷ, ಜಲವಳ್ಳ ಕರ್ಕಿಯ 44 ವರ್ಷದ ಮಹಿಳೆ, ತಲಗೋಡಿನ 53 ವರ್ಷದ ಪುರುಷ ಸೇರಿದಂತೆ ಇಂದು ಮೂರು ಜನರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ.

ಜಿಲ್ಲೆಯಲ್ಲಿ 46 ಕೇಸ್

ಕಾರವಾರ: ಜಿಲ್ಲೆಯಲ್ಲಿಂದು 46 ಕರೊನಾ ಕೇಸ್ ದಾಖಲಾಗಿದೆ. ಇದೇ ವೇಳೆ ವಿವಿಧ ಆಸ್ಪತ್ರೆಯಿಂದ 24 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 4, ಸಿದ್ದಾಪುರ 3, ಮುಂಡಗೋಡಿನಲ್ಲಿ 15, ಯಲ್ಲಾಪುರ 18 ಪ್ರಕರ‌ಣ‌ ದೃಢಪಟ್ಟಿದೆ. ಇದರೊಂದಿಗೆ 12,975ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ

ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ ಮತ್ತು ಶ್ರೀಧರ ನಾಯ್ಕ, ಹೊನ್ನಾವರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version