Trending

ಉತ್ತರಕನ್ನಡದಲ್ಲಿ 45 ಕೇಸ್: 246 ಮಂದಿ ಗುಣಮುಖ

ಹೊನ್ನಾವರ : ತಾಲ್ಲೂಕಿನಲ್ಲಿ ಇಂದು 10 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಪಟ್ಟಣದಲ್ಲಿ-2 ಹಾಗೂ ಗ್ರಾಮೀಣ ಭಾಗದಲ್ಲಿ 8 ಪ್ರಕರಣ ದಾಖಲಾಗಿದೆ. ಹೊನ್ನಾವರ ಪಟ್ಟಣದ 30 ವರ್ಷದ ಯುವಕ, ಕೆಳಗಿನ ಪಾಳ್ಯದ 62 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಗ್ರಾಮೀಣಭಾಗವಾದ ಕರ್ಕಿಕೋಡಿಯ 76 ವರ್ಷದ ಪುರುಷ, 65 ವರ್ಷದ ಮಹಿಳೆ, 44 ವರ್ಷದ ಮಹಿಳೆ, 20 ವರ್ಷದ ಯುವತಿ, ಅನಂತವಾಡಿಯ 38 ವರ್ಷದ ಮಹಿಳೆ ಜಲವಳ್ಳಿಯ 40 ವರ್ಷದ ಮಹಿಳೆ, ನೀಲಕೋಡಿನ 67 ವರ್ಷದ ಮಹಿಳೆ, ಖರ್ವಾದ 6 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ.

ಕುಮಟಾದಲ್ಲಿ 10 ಪಾಸಿಟಿವ್:

ಕುಮಟಾ: ತಾಲೂಕಿನಲ್ಲಿಯೂ ಸಹ ಇಂದು ಒಟ್ಟು 10 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹಂದಿಗೋಣ, ಹೆರವಟ್ಟಾ, ಮೇಲಿನಕೇರಿ, ಹೆಗಡೆ ಮುಂತಾದ ಭಾಗದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಹಂದಿಗೋಣದ 70 ವರ್ಷದ ವೃದ್ಧ, ಹೆರವಟ್ಟಾದ 62 ವರ್ಷದ ಮಹಿಳೆ, ಅಘನಾಶಿನಿಯ 43 ವರ್ಷದ ಪುರುಷ, ಗೋಕರ್ಣ ದೇವಣಾದ 7 ವರ್ಷದ ಬಾಲಕ, ಮೇಲಿನಕೇರಿಯ 18 ವರ್ಷದ ಯುವಕ, 16 ವರ್ಷದ ಬಾಲಕ, 43 ವರ್ಷದ ಮಹಿಳೆ, 50 ವರ್ಷದ ಪುರುಷ, ಹೆಗಡೆಯ 55 ವರ್ಷದ ಮಹಿಳೆ, 23 ವರ್ಷದ ಯುವತಿಗೆ ಪಾಸಿಟಿವ್ ಬಂದಿದೆ. ಇಂದು 10 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,733 ಕ್ಕೆ ಏರಿಕೆಯಾಗಿದೆ.

ಯಲ್ಲಾಪುರದಲ್ಲಿಂದು ಇಬ್ಬರಿಗೆ ಸೋಂಕು:

ಯಲ್ಲಾಪುರ: ತಾಲೂಕಿನಲ್ಲಿ ಸೋಮವಾರ ಇಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 55 ಕ್ಕೇರಿದೆ. ಇಂದು ಕಳಚೆ ಹಾಗೂ ಉದ್ಯಮನಗರಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಮಂಗಳವಾರ ತಾಲೂಕಾ ಆಸ್ಪತ್ರೆ, ನೂತನನಗರ, ಉಪಳೇಶ್ವರ, ಕಿರವತ್ತಿಯ ಬೊಂಬ್ಡಿಕೊಪ್ಪಗಳಲ್ಲಿ ತಣಪಾಸಣೆ ನಡೆಯಲಿದೆ.

ಶಿರಸಿಯಲ್ಲಿಂದು 10 ಮಂದಿಗೆ ಕೊರೊನಾ ದೃಢ

ಶಿರಸಿ: ತಾಲೂಕಿನಲ್ಲಿ ಸೋಮವಾರ 10 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 41 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇಂದು ಎಸ್‍ಬಿಐ ಕಾಲೋನಿಯಲ್ಲಿ 3, ರಂಗಾಪುರದಲ್ಲಿ 2, ಎಪಿಎಮ್‍ಸಿ ಕ್ವಾಟರ್ಸ್‍ನಲ್ಲಿ 2, ನಾಡಿಗ ಗಲ್ಲಿಯಲ್ಲಿ 1, ಸಿ ಪಿ ಬಝಾರಿನಲ್ಲಿ 1, ಹೆಗ್ಗಾರಿನಲ್ಲಿ 1 ಕೇಸ್ ದೃಢವಾಗಿದೆ.

ಜಿಲ್ಲೆಯಲ್ಲಿಂದು 45 ಕೇಸ್

ಉತ್ತರಕನ್ನಡ ಜಿಲ್ಲೆಯಲ್ಲಿಂದು 45 ಕರೊನಾ ಕೇಸ್ ದಾಖಲಾಗಿದೆ. ಇದೇ ವೇಳೆ ಇಂದು 246 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು 45 ಕರೊನಾ ಕೇಸ್ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13 ಸಾವಿರದ ಗಡಿದಾಟಿದೆ. ಕಾರವಾರದಲಿ 3 ಭಟ್ಕಳ 0, ಹಳಿಯಾಳದಲ್ಲಿ ಮೂರು ಕೇಸ್ ದೃಢಪಟ್ಟಿದೆ. ಹಳಿಯಾಳದಲ್ಲಿ ಒಂದು ಸಾವಾಗಿದ್ದು, ಇದರೊಂದಿಗೆ ಸಾವಿನ‌ ಸಂಖ್ಯೆ 165ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ ಮತ್ತು ಯೋಗೇಶ ಮಡಿವಾಳ ಕುಮಟಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button