ಜಿಲ್ಲೆಯಲ್ಲಿಂದು 32 ಕೇಸ್: ಒಂದು ಸಾವು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 32 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 13,471ಕ್ಕೆ ಏರಿಕೆಯಾಗಿದೆ. ಕಾರವಾರ 2, ಶಿರಸಿ 2, ಯಲ್ಲಾಪುರ 2, ಹಳಿಯಾಳ 6, ಮುಂಡಗೋಡಿನಲ್ಲಿ 17 ಕೇಸ್ ದೃಢಪಟ್ಟಿದೆ. ಇಂದು ಕೋವಿಡ್ನಿಂದ ಒಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 173ಕ್ಕೆ ಏರಿಕೆಯಾಗಿದೆ. 86 ಮಂದಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊನ್ನಾವರ: ತಾಲೂಕಿನಲ್ಲಿ ಇಂದು ಓರ್ವ ಯುವಕನಲ್ಲಿ ಕರೊನಾ ಪಾಸಿಟಿವ್ ಕಂಡುಬoದಿದೆ. ತಾಲೂಕಿನ ಗ್ರಾಮೀಣ ಭಾಗವಾದ ಮಂಕಿಯ 18 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು 8 ಜನರು ಡಿಸ್ಚಾರ್ಜ್ ಆಗಿದ್ದು, ವಿವಿಧ ಆಸ್ಪತ್ರೆಯಲ್ಲಿ 5 ಜನರು ಮತ್ತು ಮನೆಯಲ್ಲಿ 9 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಮಟಾದಲ್ಲಿ ಒಂದು ಕೇಸ್:
ಕುಮಟಾ: ತಾಲೂಕಿನಲ್ಲಿ 1 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ಕುಮಟಾದ 35 ವರ್ಷದ ಮಹಿಳೆಗೆ ಕರೋನಾ ಪಾಸಿಟಿವ್ ಬಂದಿದೆ. ಇಂದು 1 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1905 ಕ್ಕೆ ಏಕೆಯಾಗಿದೆ.
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಊರಿನ ಜಾತ್ರೆಗೆ ಬಂದಿದ್ದ ಯುವ ಜೋಡಿ ಸಾವಿನ ಯಾತ್ರೆಗೆ ನಡೆದಿದ್ದೇಕೆ ?ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ
- ಅಪ್ರಾಪ್ತ ಬಾಲಕಿಯನ್ನು ಮೊಬೈಲ್ ನಲ್ಲಿಯೇ ಪರಿಚಯಿಸಿಕೊಂಡ ಡಿಪ್ಲೋಮಾ ವಿದ್ಯಾರ್ಥಿ: ದೂರದೂರಿಂದ ಬಂದು ಬೀಚಿಗೆ ಕರೆದುಕೊಂಡು ಹೋಗಿ ಗರ್ಭವತಿ ಮಾಡಿದ ಭೂಪ
- 4 ಲಕ್ಷ ಮೌಲ್ಯದ ಬಂಗಾರದ ಸರ ಕಳೆದುಕೊಂಡ ಶಿಕ್ಷಕಿ: ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು
- ಕಳೆದು ಹೋದ ಕಪ್ಪು ಬಣ್ಣದ ಬ್ಯಾಗ್ : ಬ್ಯಾಗ್ಗನಲ್ಲಿದ್ದ ಏನ್ ಜಿ ಓ ಗೆ ಸೇರಿದ ಅಮೂಲ್ಯ ಕಾಗದ ಪತ್ರ ಹಾಗೂ ಪರ್ಸ್
- SBI Recruitment 2023: 868 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ:40 ಸಾವಿರ ಮಾಸಿಕ ವೇತನ