ಕಬ್ಬು ತುಂಬಲು ಬಂದಿದ್ದ ಲಾರಿಗೆ ಬೆಂಕಿ ತಗುಲಿ ಹಾನಿ

ಮುಂಡಗೋಡ: ಕಬ್ಬು ತುಂಬಿಕೊಂಡು ಹೋಗಲು ಗದ್ದೆಗೆ ಬಂದಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾದ ಘಟನೆ ತಾಲೂಕಿನ ಬಾಚಣಕಿ ಗ್ರಾಮದ ಹತ್ತಿರ ಜರುಗಿದೆ. ಗದ್ದೆಯಲ್ಲಿ ಕಟಾವು ಮಾಡಿದ್ದ ಕಬ್ಬನ್ನು, ಹಳಿಯಾಳದ ಸಕ್ಕರೆ ಕಾರ್ಖಾನೆಗೆ ಸಾಗಿಸಲು ಬಂದಾಗ ಈ ಅವಘಡ ಸಂಭವಿಸಿದೆ.

ಅಗ್ನಿ ಶಾಮಕ ಠಾಣೆಯ ಸಪ್ನಿಲ್ ಪೆಡ್ನೇಕರ್, ಸಿಬ್ಬಂದಿ ಅಭಿ ಕುರುವಿನಕೊಪ್ಪ, ಬಸವರಾಜ ನಾಣಪೂರ, ಚಮನಸಾಬ ನಧಾಪ್, ಹರೀಶ ಪಟಗಾರ, ಮಾರುತಿ ಭಜಂತ್ರಿ ಬೆಂಕಿ ನಂದಿಸುವವಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಇದನ್ನೂ ಓದಿ: ಪ್ರಮುಖ‌‌ ಸುದ್ದಿಗಳು

Exit mobile version