ಕಟ್ಟಿಗೆ ತರಲು ಹೋದ ಮಹಿಳೆಯ ಕೈಗೆ ಗುಂಡು! ಸ್ಕ್ಯಾನಿಂಗ್ ಮಾಡಿಸಿದಾಗ ಶಾಕ್

ಮಹಿಳೆಯ ಕೈಯೊಳಗಿತ್ತು ಗುಂಡಿನ ಚೂರು
ಶಸ್ತ್ರಚಿಕಿತ್ಸೆ ನಡೆಸಿ ಗುಂಡಿನ ಚೂರು ತೆಗೆದ ವೈದ್ಯರು

ಕಾರವಾರ: ದಂಪತಿಗಳು ಕಟ್ಟಿಗೆ ತರಲು ಹೋದ ವೇಳೆ ಮಹಿಳೆಯ ಕೈಗೆ ಗುಂಡು ತಗಲಿದೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದ ಗೋಯಲ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. ರಸಿಕಾ ಗುಂಡು ತಗಲಿ ಗಾಯಗೊಂಡ ಮಹಿಳೆ. ಕಟ್ಟಿಗೆ ತರಲು ಅರಣ್ಯಕ್ಕೆ ತೆರಳಿದ್ದ ಮಹಿಳೆಯ ಕೈಗೆ ಏನೋ ಬಡಿದಂತಾಗಿ ಆಳವಾದ ಗಾಯವಾಗಿತ್ತು. ತಕ್ಷಣ ಪತಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು.


ಈ ಸ್ಕ್ಯಾನ್ ಮಾಡಿ ಪರೀಕ್ಷಿಸಿದಾಗ ಆಕೆ ಕೈ ಒಳಭಾಗದಲ್ಲಿ ಗುಂಡಿನ ಚೂರುಗಳು ಪತ್ತೆಯಾಗಿದೆ. ಕಾಡಿನಲ್ಲಿ ಕಾಡುಪ್ರಾಣಿ ಬೇಟೆಯಾಡುವವರು ಪ್ರಾಣಿ ಎಂದು ಗುಂಡು ಹಾರಿಸಿರುವ ಸಾಧ್ಯತೆಗಳಿವೆ ಎನ್ನುವ ಅನುಮಾನ ಮೂಡಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಮಹಿಳೆಯ ಕೈಯಿಂದ ಗುಂಡಿನ ಚೂರುಗಳನ್ನು ತೆಗೆದಿದ್ದಾರೆ. ಘಟನೆ ಸಂಬoಧ ಕಾರವಾರದ ಕದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ವಿಸ್ಮಯ ನ್ಯೂಸ್, ಕಾರವಾರ

[sliders_pack id=”1487″]

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version