ಮುರ್ಡೇಶ್ವರ ಕಡಲತೀರದಲ್ಲಿ ಹೊಡೆದಾಟ: ಓರ್ವ ಗಂಭೀರ

ಮುರುಡೇಶ್ವರ: ಕಡಲತೀರದಲ್ಲಿ ಕಳೆದ ಕೆಲ ತಿಂಗಳಗಳಿoದ ಗೂಡಂಗಡಿಕಾರರು ಹಾಗೂ ಮೀನುಗಾರರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ವಿಕೋಪಕ್ಕೆ ತಿರುಗಿದ್ದು, ರಾತ್ರಿ ನಡೆದ ಹೊಡೆದಾಟದಲ್ಲಿ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಗೂಡಂಗಡಿಕಾರರ ಸಂಘದ ಉಪಾಧ್ಯಕ್ಷ ವೆಂಕಟೇಶ ಈರಯ್ಯ ಹರಿಕಾಂತ ಎಂದು ಗುರುತಿಸಲಾಗಿದೆ ಮೀನುಗಾರಿಕೆ ಮುಗಿಸಿ ವಾಪಸ್ಸಾದ ಕೆಲ ಮೀನುಗಾರರು ದೋಣಿ ಇಡುವ ಸ್ಥಳದಲ್ಲಿ ಅಂಗಡಿ ಇಟ್ಟ ಬಗ್ಗೆ ಆಕ್ಷೇಪಿಸಿ ಅಂಗಡಿಯನ್ನು ನೆಲಕ್ಕೆ ಉರುಳಿಸಿದ್ದಾರೆ.

ಅಂಗಡಿಯನ್ನು ಕೆಡವಿದಕ್ಕೆ ಆಕ್ರೋಶಗೊಂಡ ಗೂಡಂಗಡಿಕಾರರ ಸಂಘದ ಉಪಾಧ್ಯಕ್ಷ ವೆಂಕಟೇಶ ಹರಿಕಾಂತ, ಅಂಗಡಿಯನ್ನು ತೆರವು ಬದಲು ಹೇಳಿದ್ರೆ ಆಗಿತ್ತು ಎಂದು ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿದೆ.
ಇದೇ ವಿಷಯ ಮಾತಿಗೆ ಮಾತಾಗಿ ಕೊನೆಗೆ ಹೊಡೆದಾಟಕ್ಕೆ ತಿರುಗಿದ್ದು, ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ವೆಂಕಟೇಶ, ಅಣ್ಣಪ್ಪ ಹರಿಕಾಂತ, ಗಣೇಶ ಹರಿಕಾಂತ, ಕುಮಾರ ಹರಿಕಾಂತ ಸೇರಿದಂತೆ ನಾಲ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಆರೋಪಿಗಳ ಪೈಕಿ ಒಬ್ಬರಾಗಿರುವ ಗಣೇಶ ಹರಿಕಾಂತ ಅವರ ಪತ್ನಿ ಸರಸ್ವತಿ ಹರಿಕಾಂತ ನನ್ನ ಮೇಲೆ ವೆಂಕಟೇಶ್ ಹಲ್ಲೆ ನಡೆಸಿರುವುದಾಗಿ ಪ್ರತಿ ದೂರು ನೀಡಿದ್ದಾರೆ. ಈ ಘಟನೆ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version