ಪಕ್ಕದ ಮನೆಯಲ್ಲಿ ಮಹಿಳೆ ಸಾವನ್ನಪ್ಪಿರುವುದನ್ನು ನೋಡಿ ಕುಸಿದುಬಿದ್ದು ಸಾವನ್ನಪ್ಪಿದ ವ್ಯಕ್ತಿ: ಕಾಡುತ್ತಿದೆ ಸಂಶಯ?

ಭಟ್ಕಳ: ಪಕ್ಕದ ಮನೆಯಲ್ಲಿ ಸಾವನ್ನಪ್ಪಿದ ಮಹಿಳೆಯ ಶವ ನೋಡಿ ವ್ಯಕ್ತಿಯೊರ್ವವರು ಗಾಬರಿಗೊಂಡು ಅಲ್ಲೆ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯ ಮೃತಪಟ್ಟ ಘಟನೆ ತಾಲೂಕಿನ ಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕೊಂಕಣಾತಿ ಬೈಲನಲ್ಲಿ ನಡೆದಿದೆ. ಶಿರಾಲಿ ಪಂಚಾಯಿತಿಯ ಚಿತ್ರಾಪುರದ ನಿವಾಸಿ ಗಜಾನನ ಉಲ್ಲಾಸ ಮಾಂಜ್ರೆಕರ್(43) ಮೃತ ವ್ಯಕ್ತಿ. ಇವರು ಶನಿವಾರ ಕೊಪ್ಪದ ಕೊಂಕಣಾತಿಬೈಲನಲ್ಲಿರುವ ಸಂಬoಧಿಕರ ಮನೆಗೆ ತೆರಳಿದ್ದರು. ಅಲ್ಲಿ ಪಕ್ಕದ ಮನೆಯಲ್ಲಿ ಶಬ್ದ ಬಂದಿದ್ದು ಅದನ್ನು ನೋಡಲು ಹೋಗಿ ಹೋಗಿದ್ದರು.

ಈ ವೇಳೆ ಅಲ್ಲಿ ಗಾಯಗೊಂಡ ಲಕ್ಷ್ಮಿ ನಾಯ್ಕ ಸುಟ್ಟು ಮೃತಪಟ್ಟಿರುವದನ್ನು ನೋಡಿ ಗಾಬರಿಗೊಂಡಿದ್ದಾರೆ. ಗಾಬರಿಗೊಂಡು ತೆರಳುವಾಗ ದಾರಿಯಲ್ಲಿ ಕುಸಿದು ಬಿದ್ದಿದ್ದ ಅವರನ್ನು ಕೂಡಲೆ ಮುರ್ಡೇಶ್ವರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಮೃತಪಟ್ಟಿರುವದನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಮೃತರ ಬಲಗೆನ್ನೆಯ ಭಾಗ ಉಬ್ಬಿದ್ದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಮೃತರ ಸಹೋದರ ಉಲ್ಲಾಸ ಮಾಂಜ್ರೆಕರ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version