ಬಹಿರ್ದೆಸೆಗೆ ಹೋದಾಗ ಕೆರೆಯಲ್ಲಿ ಕಾಲುಜಾರಿ ಬಿದ್ದು ಬಾಲಕ ಸಾವು

ಮುಂಡಗೋಡ: ಬಾಲಕನೊಬ್ಬ ಬಹಿರ್ದೆಸೆಗೆಂದು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕಾಳಗನಕೊಪ್ಪ ಗ್ರಾಮದ ಹತ್ತಿರವಿರುವ ಒಡ್ಡಿನ ಕೆರೆಯಲ್ಲಿ ನಡೆದಿದೆ. ಕಾಳಗನಕೊಪ್ಪ ಗ್ರಾಮದ ಗಣೇಶ ತೆಗ್ಗಳ್ಳಿ (8)ಮೃತಪಟ್ಟ ಬಾಲಕ. ಈತನು ತನ್ನ ತಂದೆಯ ಜೊತೆಗೆ ಗದ್ದೆಗೆ ಹೋಗಿದ್ದನು. ಸಂಜೆ ಬಹಿರ್ದೆಸೆಗೆಂದು ಕೆರೆಯ ಹತ್ತಿರ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬಾಲಕನ ಶೋಧ ಕಾರ್ಯ ನಡೆಸಿದರು. ಸತತ ಶೋಧ ಕಾರ್ಯದ ಬಳಿಕ ಬಾಲಕನ ಮೃತದೇಹ ತಡರಾತ್ರಿ ಪತ್ತೆಯಾಗಿದೆ. ಬಾಲಕನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version