ಕಾಡಿನಲ್ಲಿ ಬೆಳಗುತ್ತಿತ್ತು ನಿಗೂಢ ದೀಪ: ರಹಸ್ಯ ಬೇಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ!ಗ್ರಾಮಸ್ಥರು ನಿರಾಳ

ಕಾರವಾರ: ತಾಲ್ಲೂಕಿನ ಹಬ್ಬುವಾಡಾ ಹಾಗೂ ಹರಿದೇವ ನಗರ ಪ್ರದೇಶದ ಗುಡ್ಡದಲ್ಲಿ ಕಳೆದ ಕೆಲವು ದಿನಗಳಿಂದ ಗೋಚರಿಸುತ್ತಿದ್ದ ನಿಗೂಢ ದೀಪದ ರಹಸ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಕಿಡಿಗೇಡಿಗಳು ಶೋಕಿಗಾಗಿ ಮಾಡಿದ ಕೃತ್ಯ ಬೆಳಕಿಗೆ ಬಂದಿದೆ.ಕಳೆದ ಸುಮಾರು ಒಂದು ವಾರದಿಂದ ಹಬ್ಬುವಾಡಾದ ನಾರಾಯಣ ಶೇಟ್ ರಸ್ತೆಯಿಂದ ನೇರವಾಗಿ ದಕ್ಷಿಣದತ್ತ ನೋಡಿದರೆ ಅಲ್ಲಿರುವ ಗುಡ್ಡದ ತುದಿಯಲ್ಲಿ ಸಂಜೆ 7 ಗಂಟೆಯ ನಂತರ ದೀಪವೊಂದು ಉರಿಯುತ್ತಿರುವ ದೃಶ್ಯ ಗೋಚರಿಸುತ್ತಿತ್ತು. ಹಬ್ಬುವಾಡಾದಿಂದ ಕಾರವಾರ-ಕೈಗಾ ರಸ್ತೆಯ ಮೂಲಕ ಸಾಗುವಾಗ ಬಾಂಡಿಶಿಟ್ಟಾದ ವರೆಗೂ ಗುಡ್ಡದ ಮೇಲೆ ಈ ದೀಪ ಉರಿಯುವದನ್ನು ಸ್ಥಳಿಯರು ಹಾಗೂ ವಾಹನ ಸವಾರರು ಗಮನಿಸಿದ್ದರು.

ವಿದ್ಯುತ್ ದೀಪದಂತೆ ಬೆಳಗುತ್ತಿದ್ದರೂ ಬೆಳಿಗ್ಗೆ 5 ಗಂಟೆಯ ನಂತರ ಮಾಯವಾಗುತ್ತಿತ್ತು. ಇದನ್ನು ಕಂಡ ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಆತಂಕ ಕೂಡ ಸೃಷ್ಟಿಯಾಗಿತ್ತು. ಆದರೆ ನಿಗೂಢ ದೀಪದ ಸತ್ಯ ಬೇದಿಸಲು ಮುಂದಾದ ಆ ಭಾಗದ ಯುವಕರು ಕಾಡಿಗೆ ತೆರಳಿ ಜಾಲಾಡಿದ್ದರು.‌ ಇನ್ನು ಅಕ್ರಮ ಚಟುವಟಿಕೆ ಸಂಶಯದ ಹಿನ್ನೆಲೆಯಲ್ಲಿ ಸ್ಥಳೀಯರ ಒತ್ತಾಯದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸತ್ಯ ಹೊರಬಂದಿದೆ.

ಬೃಹತ್ ಮರವೊಂದರ ಮೇಲೆ ಒಂದು ಧ್ವಜ, ಒಂದು ಬ್ಯಾನರ್ ಹಾಗೂ ಎರಡು ಚಿಕ್ಕ ಸೋಲಾರ್ ದೀಪಗಳನ್ನು ಅಳವಡಿಸಿರುವುದು ಕಂಡು ಬಂದಿದೆ. ಯಾರೋ ಪ್ರವಾಸಿಗರು ಅಥವಾ ಸ್ಥಳಿಯರು ಅಲ್ಲಿಗೆ ಮೋಜಿಗೆ ತೆರಳಿ ಬಳಿಕ ತಾವು ಬಂದ ಗುರುತು ದೂರದಿಂದ ಕಾಣಿಸಬೇಕು ಎಂಬ ಉದ್ದೇಶಕ್ಕಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು ಎಲ್ಲವನ್ನು ತೆರವುಗೊಳಿಸಲಾಗಿದೆ.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ)  ಮೊಬೈಲ್ : 9886460777,,, INDIAN FAMOUS ASTROLOGER ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್ ಕಾರವಾರ

Exit mobile version