ಅರಣ್ಯದಲ್ಲಿ‌ ಎಸೆದಿದ್ದ‌ ಚೀಲ ನೋಡಿ‌ ಶಾಕ್: ಸಿಬ್ಬಂದಿಗೆ ಸಿಕ್ಕಿತು ಅನುಮಾನಾಸ್ಪದ ಪಿಸ್ತೂಲು

ಜೊಯಿಡಾ: ಅರಣ್ಯದಲ್ಲಿ ಯಾರೋ ವ್ಯಕ್ತಿಗಳು ಎಸೆದಿರುವ ಎರಡು ಚೀಲಗಳು ಮತ್ತು ಪಿಸ್ತೂಲು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಭೇಟಿ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ನಡೆದಿರೋದು ತಾಲೂಕಿನ ಕ್ಯಾಸಲ್ ರಾಕ್ ಹತ್ತಿರದ ಕುಣಗಿಣಿ ಚಕ್ ಪೋಸ್ಟ್ ಹತ್ತಿರ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಕ್ಯಾಸಲ್ ರಾಕ್ ವನ್ಯ ಜೀವಿ ವಲಯದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದರಿಂದ ಈ ಪಿಸ್ತೂಲು ಮೆಲ್ನೋಟಕ್ಕೆ ಏರ್ ಗನ್ ರೀತಿ ಕಾಣುತ್ತಿದ್ದು,ಇದರ ಬಗ್ಗೆ ತನಿಖೆಯಿಂದ ಅಷ್ಟೆ ಸತ್ಯಾಂಶ ತಿಳಿಯಬೇಕಾಗಿದೆ. ಆದರೆ ಅಧಿಕಾರಿಗಳು ಗನ್ ಕುರಿತು ಇನ್ನೂ ಏನನ್ನು ಸ್ಫಷ್ಟಪಡಿಸಿಲ್ಲ.

ಸ್ಥಳಕ್ಕೆ ಕೆಟಿಆರ್ ಎಸಿಎಪ್ ಶಿವಾನಂದ ತೊಡ್ಕರ,ಅರ್ ಎಪ್ ಒ ಎಮ್.ಎಸ್ ಕಳ್ಳಿಮಠ ಮತ್ತು ದಾಂಡೇಲಿ ಡಿವಾಯ್ ಎಸ್ ಪಿ ಕೆ.ಎಲ್ ಗಣೇಶ,ಜೊಯಿಡಾ ಸಿಪಿಐ ಬಾಬಾ ಸಾಹೇಬ ಹುಲ್ಲಣ್ಣನವರ,ರಾಮನಗರ ಪಿಎಸ್ ಐ ಮಂಜುಳಾ ರಾವೋಜಿ,ಕಿರಣ ಪಾಟೀಲ ಭೇಟಿ ನೀಡಿ ಪರಿಶೀಕನೆ ನಡೆಸಿದ್ದು,ತನಿಖೆ ನಡೆಯುತ್ತಿದೆ. ಶ್ವಾನ ದಳವನ್ನೂ ಕೂಡಾ ಕರೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777.

ವಿಸ್ಮಯ ನ್ಯೂಸ್ ಜೋಯ್ಡಾ

Exit mobile version