ಕುಮಟಾದಲ್ಲಿ ಒಳಾಗಂಣ ಕ್ರೀಡಾಂಗಣ ಮತ್ತು ಈಜು ಕೊಳ ನಿರ್ಮಿಸಲು ಮನವಿ ಸಲ್ಲಿಕೆ

ಕುಮಟಾ: ಕ್ಷೇತ್ರದ ಯುವ ಜನತೆಗೆ ಒಳಾಗಂಣ ಕ್ರೀಡಾಂಗಣ ಮತ್ತು ಈಜು ಕೊಳ ಒದಗಿಸಿಕೊಡುವಂತೆ ನಮ್ಮ ಯು.ಕೆ ಅಡ್ಮೀನ್ ಆದ ಅಜಿತ್ ಆಚಾರ್ಯ ಹಾಗೂ ಪ್ರಶಾಂತ ನಾಯ್ಕ ಕರ್ಕಿ ಅವರು ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.ಯುವ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ, ಕ್ರೀಡಾ ಪಟುಗಳಿಗೆ ಉತ್ತೇಜನ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಒಳಾಗಂಣ ಕ್ರೀಡಾಂಗಣ ಮತ್ತು ಈಜು ಕೊಳ ಒದಗಿಸಿ ಕೊಡಲು ಮನವಿ ಸಲ್ಲಿಸಲಾಗಿದೆ.

ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಶ್ರೀ ದಿನಕರ ಶೆಟ್ಟಿಯವರು, ಈ ಆಲೋಚನೆ ಮೊದಲಿನಿಂದಲೂ ಮನಸ್ಸಿನಲ್ಲಿ ಮೂಡಿತ್ತು, ಅದಕ್ಕಾಗಿ ಜಾಗವನ್ನು ಹುಡುಕುವ ಕಾರ್ಯ ನಡೆಯುತ್ತಾ ಇದೆ, ಜೊತೆಗೆ ಈ ನಿಟ್ಟಿನಲ್ಲಿ ಗಮನಸೆಳೆದ ಇಬ್ಬರಿಗೂ ಮೆಚ್ಚುಗೆ ಸೂಚಿಸಿ, ಅತೀ ಶೀಘ್ರವಾಗಿ ಕ್ಷೇತ್ರದ ಯುವ ಜನತೆಗೆ ಹಾಗೂ ಕ್ರೀಡಾ ಪಟುಗಳಿದೆ ಅನುಕೂಲವಾಗುವಂತೆ ಒಳಾಗಂಣ ಕ್ರೀಡಾಂಗಣ ಮತ್ತು ಈಜು ಕೊಳ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ವಿಸ್ಮಯ ನ್ಯೂಸ್ ಕುಮಟಾ

Exit mobile version