ನಿವೃತ್ತ ಯೋಧ ಗಣೇಶ್ ನಾಯ್ಕ್ ಗೆ ಸನ್ಮಾನ

ಅಂಕೋಲಾ: ನಗರದ ಶ್ರೀರಾಮ್ ಸ್ಟಡಿ ಸರ್ಕಲ್ ನಲ್ಲಿ ತರಬೇತಿ ಪಡೆಯುತ್ತಿರುವ ನಿವೃತ್ತ ಯೋಧ ಗಣೇಶ್ ನಾಯ್ಕ್ DAR, KSRP ಹಾಗೂ ಅಗ್ನಿಶಾಮಕ ದಳ ಹುದ್ದೆಗಳಿಗೆ ಆಯ್ಕೆಗೊಂಡಿದ್ದರಿಂದ ಶ್ರೀರಾಮ್ ಸ್ಟಡಿ ಸರ್ಕಲ್ ವತಿಯಿಂದ ರವಿವಾರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್ ನಾಯ್ಕ್ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತಾಳ್ಮೆ ಮುಖ್ಯ, ಅಭ್ಯಾಸದ ಸಮಯದಲ್ಲಿ ಅನಗತ್ಯ ವಿಷಯಗಳ ಕಡೆ ಗಮನಹರಿಸದೇ ಗುರಿಯ ಕಡೆ ಕೇಂದ್ರೀಕರಿಸುವುದು ಮುಖ್ಯ. ಶ್ರೀರಾಮ್ ಸ್ಟಡಿ ಸರ್ಕಲ್ ಈ ನಾಡಿಗೆ ಹಲವಾರು ಸೇವಾರತ್ನಗಳನ್ನು ನೀಡಿದೆ ಅದಕ್ಕೆಲ್ಲ ಸಂಸ್ಥೆಯ ನಿರ್ದೇಶಕರಾದ ಸೂರಜ್ ನಾಯಕ್ ಅವರ ಸಹಕಾರ-ಪ್ರೋತ್ಸಾಹವೇ ಕಾರಣ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸೂರಜ್ ನಾಯಕ್, ನಮ್ಮ ಶ್ರೀರಾಮ್ ಸ್ಟಡಿ ಸರ್ಕಲ್ ನಿಂದ ಈ ವರ್ಷ ಹಲವಾರು ಸ್ಪರ್ಧಾರ್ಥಿಗಳು ಉತ್ತಮ ಉದ್ಯೋಗಗಳನ್ನು ಅಲಂಕರಿಸಿದ್ದಾರೆ. ನಿವೃತ್ತ ಯೋಧ ಗಣೇಶ್ ನಾಯ್ಕ್ ಯೋಧನಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿ ಈಗ 3 ಹುದ್ದೆಗಳಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಇನ್ನೂ ಉನ್ನತ ಹುದ್ದೆ ಅವರನ್ನು ಹಿಂಬಾಲಿಸಲಿ ಎಂದು ಶುಭ ಹಾರೈಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version