Follow Us On

WhatsApp Group
Focus News
Trending

ಜ್ಞಾನಸತ್ರ ವಿಚಾರ ಸಂಕಿರಣ : ಅಯೋಧ್ಯೆ ಕುರಿತು ವಿಶೇಷ ಉಪನ್ಯಾಸ

ಅಂಕೋಲಾ : ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿರುವ, ನ್ಯಾಯವಾದಿ ನಾಗರಾಜ ನಾಯಕ ಸಂಚಾಲಕತ್ವತದ ಜ್ಞಾನಸತ್ರ ವಿಚಾರ ಸಂಕಿರಣ ಸ್ಟಾತಂತ್ರ್ಯ ಸೇನಾನಿ ದಿ.ಮಾಣಿ ನಾಯಕ ಅವರ ಬಾಸಗೋಡ ಮನೆಯಂಗಳದಲ್ಲಿ ಕಳೆದ 14 ವರ್ಷಗಳಿಂದ ನಡೆಯುತ್ತಿದೆ. ಜ್ಞಾನಸತ್ರ ವೇದಿಕೆ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಬ್ಬಳ್ಳಿ ವಿಭಾಗದ ಪ್ರಚಾರಕ ರವೀಂದ್ರ ಜಿ. ಉದ್ಘಾಟಿಸಿದರು.

ಅವರು ಅಯೋಧ್ಯ ಕುರಿತು ವಿಶೇಷ ಉಪನ್ಯಾಸ ನೀಡಿ, ಮುಸ್ಲೀಂರಲ್ಲಿರುವ ಕೆಲ ಮನೆ ಹಾಳು ಬುದ್ದಿ ಯ ಜನ ಹಿಂದೂಗಳಲ್ಲಿಯೂ ಇದ್ದಾರೆ. ಕಳೆದ 500 ವರ್ಷಗಳಿಂದ ಒಂದು ದೇವಸ್ಥಾನಕ್ಕಾಗಿ ಒಟ್ಟಾರೆ ಸಮಾಜ ಆಗ್ರಹಿಸುತ್ತಲೇ ಬಂದಿರುವುದು ಅಯೋಧ್ಯೆ ರಾಮ ಮಂದಿರ ವಿಷಯದಲ್ಲಿ ಮಾತ್ರವಾಗಿದ್ದು, ಇದು ವಿಶ್ವದಲ್ಲಿಯೇ ಮೊದಲು ಎಂದು ಹೇಳಿ ರಾಮ ಮಂದಿರ ಕಾರ್ಯ ರಾಷ್ಟ್ರೀಯತೆಯ ಭವ್ಯ ಪರಂಪರೆಯ ಕಾರ್ಯವಾಗಿದ್ದು, ಈ ದೇಗುಲ ವಿಶ್ವ ಪ್ರಸಿದ್ಧಿ ಪಡೆಯಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಸರಾಂತ ವಾಸ್ತು ಶಿಲ್ಪಿ ರಾಮ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ನಾಗರಾಜ ನಾಯಕ ಸ್ವಾಗತಿಸಿ ಪ್ರಾಸ್ತ ವಿಕ ಮಾತಗಳನ್ನಾಡಿದರು. ಆನಂದು ಭಾಗವತ ಯಕ್ಷಗಾನ ಪದದ ಮೂಲಕ, ರೇಖಾ ಹೆಗಡೆ ಭಕ್ತಿಗೀತೆ ಗಳ ಮೂಲಕ ಜನಮನ ಸೂರೆಗೊಂಡರು. ವೆಂಕಣ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಶ ಮಾಸ್ತರ ಸೂರ್ವೆ ನಿರ್ವಹಿಸಿದರು, ಗಂಗಾ ನಾಯಕ ವಂದಿಸಿದರು. ಜಯಪ್ರಕಾಶ ನಾಯಕ ಹಾಗೂ ಕುಟುಂಬ ವರ್ಗದವರು ಸಹಕರಿಸಿದರು.

ಹೊರೆ ಕಾಣಿಕೆ ಮೂಲಕ ಸಂಗ್ರಹಿಸಿದ ಪುಸ್ತಕಗಳನ್ನು ಓದುಗರಿಗೆ ವಿತರಿಸುವ ಮೂಲಕ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಸಂಪನ್ನಗೊoಡಿತು. ವಿವಿಧ ಕ್ಷೇತ್ರದ ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿ ದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button