Info
Trending

ಕಂದಾಯ ಇಲಾಖೆಯ ನಿವೃತ್ತ ನೌಕರ ವೆಂಕಟ್ರಮಣ ನಾಯ್ಕ ವಿಧಿವಶ | ಅಂಕೋಲಾ ತಾಲೂಕಿನ ಅಂಬಾರಕೋಡ್ಲ ನಿವಾಸಿ

ಅಂಕೋಲಾ : ಕಂದಾಯ ಇಲಾಖೆಯ ನಿವೃತ್ತ ನೌಕರ ಅಂಬಾರಕೋಡ್ಲದ ವೆಂಕಟ್ರಮಣ ಗಣಪತಿ ನಾಯ್ಕ(70) ಇತ್ತೀಚೆಗೆ ವಿಧಿವಶರಾದರು. ಕಂದಾಯ ಇಲಾಖೆಯಲ್ಲಿ ನೌಕರರಾಗಿ ಜಿಲ್ಲೆಯ ವಿವಿಧೆಡೆ ಸುಧೀರ್ಘ 33 ವರ್ಷಗಳ ಸೇವೆ ಸಲ್ಲಿಸಿ ವೃತ್ತಿ ಬದುಕಿನುದ್ದಕ್ಕೂ ಶಿಸ್ತು ಮತ್ತು ಸರಳ ನಡೆ ನುಡಿಗಳ ಮೂಲಕ ಹಲವರ ಪ್ರೀತಿ ವಿಶ್ವಾಸಗಳಿಸಿದ್ದರು.

ನಿವೃತ್ತಿ ನಂತರವೂ ಸದಾ ಲವಲವಿಕೆಯಿಂದಿದ್ದು, ಮಾದರಿ ವ್ಯಕ್ತಿತ್ವ ಹೊಂದಿದ್ದರು. ಮೃತರು, ಪತ್ನಿ, ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ತೊರದಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button