Follow Us On

WhatsApp Group
Focus News
Trending

ವೈದ್ಯಕೀಯ ನೆರವು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಕಾರ್ಯಕ್ರಮ

ಕುಮಟಾ: ಸ್ಥಳೀಯ ಶ್ರೀನಿವಾಸ ಚೆರಿಟೇಬಲ್ ಟ್ರಸ್ಟ್ ಕುಮಟಾ ಇವರಿಂದ ದಿ. ವಿಮಲಾ ದುರ್ಗಪ್ಪ ಪೈ (ಹೆರವಟ್ಟಾ) ಮುಂಬಯಿಯವರ ಸ್ಮರಣಾರ್ಥ ಅರ್ಹರಿಗೆ ವೈದ್ಯಕೀಯ ನೆರವು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಕಾರ್ಯಕ್ರಮ ನಡೆಯಿತು.

ಇಂತಹ ಕಾರ್ಯಕ್ರಮಗಳಿಂದ ಅರ್ಹರಿಗೆ ಧನಸಹಾಯ ನೀಡಿದಂತಾಗುತ್ತದೆ. ಅವರ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವಲ್ಲಿ ಇಂತಹ ಕಾರ್ಯಕ್ರಮಗಳು ತುಂಬಾ ಸಹಾಯಕ ಎಂಬುದಾಗಿ ಮುಖ್ಯ ಅತಿಥಿಗಳಾದ ಶ್ರೀ ವಿಷ್ಣು ಶಾನಭಾಗರವರು ಪ್ರತಿಪಾದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ. ಮೀರಾ ಶಾನಭಾಗರು ಮಾತನಾಡಿ ದಿ. ವಿಮಲಾ ಪೈ ರವರು ಬಡವರ ಮತ್ತು ಅಸಹಾಯಕರ ಬಗ್ಗೆ ಸಹಾನುಭೂತಿ, ಕರುಣೆಯುಳ್ಳವರಾಗಿದ್ದರು ಎನ್ನುತ್ತ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಶ್ರೀ. ಕೃಷ್ಣಾ ಪೈ, ಗಣ್ಯರಾದ ಶ್ರೀ. ವಿಜಯಾನಂದ ಗೋಳಿ, ವಿನೋದ ನಾಯಕ, ವಿಷ್ಣು ಹೆಗಡೆಕರ, ಆಶ್ರಮವಾಸಿಗಳಾದ ಮೋಹನ ಧಾರೇಶ್ವರ, ವಿಜಯಾ ಪೈ, ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು. ಶ್ರೀ ದಿನಕರ ಮಾಧವ ಕಾಮತ ಎಲ್ಲರನ್ನು ಸ್ವಾಗತಿಸಿದರು. ಶ್ರೀ. ಅನಂತ ಶ್ಯಾನಭಾಗರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ. ಮುರಳಿ ಭಟ್ಟರವರು ಆಭಾರಮನ್ನಿಸಿದರು.

ವಿಸ್ಮಯ ನ್ಯೂಸ್, ಕುಮಟಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button