Follow Us On

WhatsApp Group
Info
Trending

ಕುಮಟಾ ಯುಗಾದಿ ಉತ್ಸವದ ಅಂಗವಾಗಿ ನೆಡೆದ ಭಜನಾ ಸ್ಪರ್ಧೇ ಫಲಿತಾಂಶ ಪ್ರಕಟ

ಕುಮಟಾ: ಯುಗಾದಿ ಉತ್ಸವಸಮಿತಿಯು ಕಳೆದ ಹದಿಮೂರು ವರ್ಷಗಳಿಂದ ಸಾಮೂಹಿಕವಾಗಿ ಯುಗಾದಿ ಉತ್ಸವವನ್ನು ಶೋಭಾಯಾತ್ರೆ,ಧಾರ್ಮಿಕಸಭೆ,ಸಾಂಸ್ಕøತಿಕಕಾರ್ಯಕ್ರಮದೊಂದಿಗೆ ಆಚರಿಸುತಿದ್ದು,ಈ ವರ್ಷಯುಗಾದಿ ಉತ್ಸವದ ಅಂಗವಾಗಿ ತಾಲೂಕಿನ ಆಯ್ದ ಭಜನಾತಂಡಗಳಿಂದ ಭಜನಾ ಸ್ಪರ್ಧೇಯನ್ನು ನೆಲ್ಲಿಕೇರಿ ಶ್ರೀಮಹಾಸತಿ ಸಭಾಭವನದಲ್ಲಿ ಎರ್ಪಡಿಸಿತ್ತು.

ಭಜನಾ ಸ್ಪರ್ಧೇಯನ್ನು ಉದ್ಘಾಟಿಸಿ ಮಾತನಾಡಿದ ಕುಮಟಾಯುಗಾದಿ ಉತ್ಸವಸಮಿತಿಯ ಸಂಚಾಲಕರಾದ ಶ್ರೀಮುರಳಿಧರ ಪ್ರಭುರವರು- ಯುಗಾದಿ ಉತ್ಸವಸಮಿತಿ ಕಳೆದ ಹತ್ತಾರು ವರ್ಷಗಳಿಂದ ಹಿಂದು ಸಮಾಜದ ಎಲ್ಲಾ ಬಾಂಧವರು ಸೇರಿಯುಗಾದಿ ಹೊಸವರ್ಷವನ್ನು ಶೋಭಾಯಾತ್ರೆ, ಧಾರ್ಮಿಕಸಭೆ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲದೆ, ಈ ಹಿಂದೆ ನವದಂಪತಿಗಳಿಗೆ ದಾಂಪತ್ಯದೀವಿಗೆ ಎಂಬ ತರಬೇತಿ ಕಾರ್ಯಕ್ರಮ,ವಿದ್ಯಾರ್ಥಿಗಳಿಗೆ ವೃತ್ತಿತರಬೇತಿ, ನಗರವ್ಯಾಪ್ತಿಯಲ್ಲಿರುವ ಮೂರು ಕೆರೆಗಳ ಅಭಿವೃದ್ಧಿ,ಸಾಧಕರಿಗೆ ಸನ್ಮಾನ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಈ ವರ್ಷ ನಮ್ಮತಾಲೂಕಿನಲ್ಲಿರುವ ಭಜನಾತಂಡಗಳ ನಡುವೆ ಸ್ಪರ್ಧೇ ಮಾಡಬೇಕೆಂಬ ಸಮಿತಿಯಆಶಯದಂತೆ,ಈ ಭಜನಾಸ್ಪರ್ಧೇಯನ್ನು ಎರ್ಪಡಿಸಿದ್ದೇವೆ. ಭಜನೆ ನಮ್ಮ ಸಂಸ್ಕøತಿಯಒಂದು ಭಾಗವಾಗಿದ್ದು,ಇದಕ್ಕೆ ಪ್ರಾಚೀನ ಇತಿಹಾಸವಿದೆ.ಭಗವಂತನ್ನು ಒಲಿಸಿಕೊಳ್ಳುವ ನವವಿಧಭಕ್ತಿಯಲ್ಲಿ ಭಜನೆಕೂಡಒಂದಾಗಿದ್ದು,ಸುಲಭದ ಮಾರ್ಗವಾಗಿದೆ. ಭಜನೆಮಾಡುತ್ತಾ ಮಾಡುತ್ತಾ ಭಕ್ತಿರಸದಲ್ಲಿ ತನ್ಮಯರಾಗುತ್ತಾ ಅದರಲ್ಲೇ ಮೋಕ್ಷವನ್ನು ಕಂಡವರಿದ್ದಾರೆ.

ಒಂದುಕಾಲದಲ್ಲಿ ಪ್ರತಿಮನೆಮನೆಯಲ್ಲೂ ಮುಸ್ಸಂಜೆಯಾಗುತಿದ್ದಂತೆ ಭಜನೆಗಳು ನೆಡೆಯುತಿದ್ದವು. ಹಿಂದೆ ಇದ್ದಂತೆ ಕೂಡು ಕುಟುಂಬಗಳು ನಿಧಾನವಾಗಿ ಮರೆಯಾದ ಪರಿಣಾಮವಾಗಿ,ಇಂದು ಎಲ್ಲಾ ಮನೆಗಳಲ್ಲಿ ಭಜನೆ ಬಹಳ ಅಪರೂಪವಾಗಿದೆ. ಆದರೂ ಕೆಲಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಭಜನೆಗಳನ್ನು ಕಾಣಬಹುದು. ಕಣ್ಮರೆಯಾಗುತ್ತಿರುವ ಈ ಸಂಪ್ರದಾಯವನ್ನು ಮುನ್ನೆಲೆಗೆತರುವಉದ್ದೇಶದಿಂದ ಈ ಸ್ಪರ್ಧಾಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿ,ಭಾಗವಹಿಸಿದ ಎಲ್ಲರಿಗೂ ಶುಭಕೋರಿದರು.

ತಾಲೂಕಿನ ಆಯ್ದ ಎಂಟುತಂಡಗಳು ಸ್ಪರ್ಧೇಯಲ್ಲಿ ಭಾಗವಹಿಸಿದ್ದವು. ಸ್ವರಾಧಾರ ಭಜನಾಮಂಡಳಿ ಕೂಜಳ್ಳಿ ತಂಡವು ಆರು ಸಾವಿರ ರೂಪಾಯಿಯೊಂದಿಗೆ ಪ್ರಥಮ ಬಹುಮಾನವನ್ನು,ಶ್ರೀಶಾಂತೇರಿಕಾಮಾಕ್ಷಿ ಮಹಿಳಾ ಭಜನಾಮಂಡಳಿ ಕುಮಟಾತಂಡವು ನಾಲ್ಕುಸಾವಿರರೂದೊಂದಿಗೆ ದ್ವಿತೀಯಬಹುಮಾನವನ್ನು,ಶ್ರೀವೆಂಕಟರಮಣ ಭಜನಾಮಂಡಳಿ ಕುಮಟಾ ತಂಡವುಎರಡುಸಾವಿರ ಮೊತ್ತದೊಂದಿಗೆ ತೃತೀಯ ಬಹುಮಾನವನ್ನು ಪಡೆದುಕೊಂಡವು. ಯುಗಾದಿ ಉತ್ಸವದ ದಿನದಂದು ಬಹುಮಾನವನ್ನು ವಿತರಿಸಲಾಗುವುದು.

ಶ್ರೀಮತಿ ಸುಧಾಆಚಾರಿ,ರಂಜನಾಆಚಾರಿ, ಕು.ಅಶ್ವಿನಿ ಈ ಸ್ಪರ್ಧೇಯ ನಿರ್ಣಾಯಕರಾಗಿ,ಸ್ಪರ್ಧೇಯನ್ನು ನೆಡೆಸಿಕೊಟ್ಟರು. ಕೋವಿಡ್ ನಿಯಮದಂತೆ ಅತ್ಯಂತ ಶಿಸ್ತುಬದ್ಧವಾಗಿ ನೆಡೆದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಶ್ರೀ ಎಸ್ ಜಿ ನಾಯ್ಕ,ಕಾರ್ಯದರ್ಶಿ ಶ್ರೀಆನಂದು ನಾಯ್ಕ,ಕೋಶಾಧ್ಯಕ್ಷ ಶ್ರೀ ಜಿ ಎಸ್ ಹೆಗಡೆ,ಡಾ.ಸುರೇಶ ಹೆಗಡೆ,ಶ್ರೀ ವಿಠ್ಠಲ ನಾಯಕ,ರೋಹಿದಾಸಗಾವಡಿ,ಸುಧಾ ಶಾನಭಾಗ್,ಎಮ್‍ಆರ್ ಭಟ್ಟ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಅಂಜನಾ ನಾಯ್ಕ ಪ್ರಾರ್ಥಿಸಿದರು. ಶ್ರೀ ಅರುಣ ಮಣಕೀಕರ್ ಮತ್ತು ಶ್ರೀ ರಾಜು ಶೆಟ್ಟಿ ನಿರೂಪಿಸಿದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button