ಹಿರಿಯ ಜವಳಿ ವರ್ತಕ ಪಾಂಡುರಂಗ ಕಾಂಜನ್ ವಿಧಿವಶ : ರವಿವಾರ ಅಂತ್ಯಕ್ರಿಯೆ : ಸಂಸದ ಕಾಗೇರಿಯಿಂದ ಸಂತಾಪ

ಅಂಕೋಲಾ: ತಾಲೂಕಿನ ಖ್ಯಾತ ಜವಳಿ ವರ್ತಕರೂ,ಕನ್ನಡ ವೈಶ್ಯ ಸಮಾಜದ ಹಿರಿಯರೂ , ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಪಟ್ಟಣದ ಜೋಗಳಸೆ ನಿವಾಸಿ ಪಾಂಡುರಂಗ ವಿಠ್ಠಲ ಶೆಟ್ಟಿ ಕಾಂಜನ್ (76) ಅವರು ಅನಾರೋಗ್ಯದಿಂದ ನಿಧನರಾದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ವೈಶ್ಯ ಟ್ರೇಡರ್ಸ್ ಜವಳಿ ಅಂಗಡಿ ಮೂಲಕ ತಾಲೂಕು , ಜಿಲ್ಲೆಯ ಇತರೆಡೆಯೂ ಪ್ರಸಿದ್ಧ ವರ್ತಕರಾಗಿ, ಗುರುತಿಸಿಕೊಂಡಿದ್ದ ಅವರು ವೈಶ್ಯ ಸಮಾಜದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಪಾರ ಕೊಡುಗೆ ನೀಡಿದ್ದರು.
ಶೃಂಗೇರಿ ಜಗದ್ಗುರುಗಳ ಭಕ್ತರಾಗಿ ಅವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದ ಅವರು, ಮಿತಭಾಷಿ, ಹಾಗೂ ಸರಳ ಸಜ್ಜನಿಕೆಯ ಸಜ್ಜನಿಕೆಯ ವ್ಯಕ್ತಿಯಾಗಿ ವಿವಿಧ ಸಮಾಜದ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು.
ಮೃತರು ಪತ್ನಿ, ಮಗ,ಮಗಳು ಅಪಾರ ಬಂಧು ಬಳಗ ತೊರೆದಿದ್ದಾರೆ. ರವಿವಾರ ಬೆಳಿಗ್ಗೆ 9 ಗಂಟೆಯವರೆಗೆ ಸ್ಪಗೃಹದಲ್ಲಿ ಮೃತರ, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಕೋಟೆವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಮುಖ ಭಾಸ್ಕರ ನಾರ್ವೇಕರ್ ಸೇರಿದಂತೆ ಹಲವು ಗಣ್ಯರು ಪಾಂಡುರಂಗ್ ಶೆಟ್ಟಿ ಕಾಂಜನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ