Follow Us On

Google News
Big News
Trending

ಕೆಲಸದ ಆಮಿಷವೊಡ್ಡಿ ಬಡ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ ಈ ಕೀಚಕ

ಉತ್ತರಕನ್ನಡ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವ ಸುದ್ದಿ
ಕೆಲಸಕೊಡಿಸುತ್ತೇನೆಂದು ನಂಬಿಸಿ ಹೆಣ್ಣುಮಕ್ಕಳಿಗೆ ಮೋಸ

ಸಿದ್ದಾಪುರ: ಇದು ಉತ್ತರಕನ್ನಡ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವ ಸುದ್ದಿ. ಜಿಲ್ಲೆಯ ಮತ್ತು ಕರಾವಳಿ ಭಾಗದ ಬಡ ಹೆಣ್ಣುಮಕ್ಕಳನ್ನು ಸರಕಾರಿ ಕೆಲಸ ಕೊಡಿಸುತ್ತೇನೆಂದು ಬೆಂಗಳೂರಿಗೆ ಕರೆದೊಯ್ದು ವೇಶ್ಯಾವಟಿಕೆಯ ಜಾಲಕ್ಕೆ ಬಲವಂತವಾಗಿ ತಳ್ಳಲಾಗುತ್ತಿದೆ. ಇದೊಂದು ವಿಷಯ ಈಗ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಈ ವೇಶ್ಯಾವಾಟಿಕೆ ಜಾಲದ ಪ್ರಮುಖ ರೂವಾರಿ ಮತ್ಯಾರು ಅಲ್ಲ, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪ್ರಮೋದ ಹೆಗಡೆ ಎಂಬುದು ಈಗ ತಿಳಿದುಬಂದಿದೆ.

ಸದ್ಯ ಬೆಂಗಲೂರಿನಲ್ಲಿ ವಾಸಿಸಿರುವ ಸಿದ್ದಾಪುರ ತಾಲೂಕಿನ ಪ್ರಮೋದ್ ಹೆಗಡೆ, ಜಿಲ್ಲೆಯ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿರುವ ಮಾಹಿತಿಯೊಂದು ದೊರೆತಿದೆ. ತಾಲೂಕಿನ ಕಂಚಿಕೈ ಗ್ರಾಮದ ಇಟ್ಲೋಣಿ ಊರಿನ ಪ್ರಮೋದ ಹೆಗಡೆ ಎಂಬಾತ, ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಇತ್ತಿಚೆಗೆ ಹುಬ್ಬಳ್ಳಿಯಿಂದ ಪೋಲೀಸರು ಪ್ರಮೋದ ಹೆಗಡೆಯನ್ನು ಹುಡುಕಿಕೊಂಡು ಶಿರಸಿಗೆ ಬಂದಿದ್ದರು ಎಂಬ ಮಾಹಿತಿ ದೊರಕಿದೆ.

10ನೇ ತರಗತಿ ವ್ಯಾಸಾಂಗ ಮೊಟಕುಗೊಳಿಸಿ ಬೆಂಗಳೂರಿಗೆ ಬಂದಿದ್ದ ಈತ ಫೇಸ್‌ಬುಕ್ ನಲ್ಲಿ ನಕಲಿ ಖಾತೆ ತೆರೆದು ಬೇರೆಯವರ ಫೋಟೋ ಅಪ್‌ಲೋಡ್ ಮಾಡಿ ಶ್ರೀಮಂತ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಬಳಿಕ ಅವರ ಸಲುಗೆಪಡೆದು, ಅವರಿಗೆ ಯಾಮಾರಿಸುತ್ತಿದ್ದ ಎನ್ನುವ ವಿಷಯವೂ ಬಹಿರಂಗೊoಡಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button