Focus NewsImportant
Trending

ಅರಣ್ಯದಲ್ಲಿ ಬೆಂಕಿ ನಂದಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶ: ಅರಣ್ಯ ಕಾವಲುಗಾರ ಸಾವು

ಯಲ್ಲಾಪುರ: ಬೆಂಕಿ ನಂದಿಸುವ ಸಂದರ್ಭದಲ್ಲಿ ಅರಣ್ಯದ ಕಾವಲುಗಾರ ಹೈವೊಲ್ಟೇಜ್ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ, ಮೃತಪಟ್ಟಿರುವ ಘಟನೆ ಇಡುಗುಂದಿ ವಲಯ ಅರಣ್ಯ ವ್ಯಾಪ್ತಿಯ ತೆಲಂಗಾರದಲ್ಲಿ ನಡೆದಿದೆ. ಅರಣ್ಯ ವೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ವಜ್ರಳ್ಳಿ ನಿವಾಸಿ ಜೂಜೆ ಲೂಯಿಸ್ ಸಿದ್ದಿ(64) ಮೃತ ದುರ್ದೈವಿ. ಈತ ಅರಣ್ಯದಲ್ಲಿ ತಗುಲಿದ ಬೆಂಕಿಯನ್ನು ನಂದಿಸುವ ಸಂದರ್ಭದಲ್ಲಿ ಕೆಳಗೆ ತುಂಡಾಗಿ ಬಿದ್ದಿದ್ದ ಅರಣ್ಯದ ಮಧ್ಯ ಹಾದುಹೋದ ವಿದ್ಯುತ್ ತಂತಿಗೆ ಸಂಪರ್ಕಕ್ಕೆ ಬಂದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಮೃತದೇಹವನ್ನು ಇಟ್ಟಿರುವ ಯಲ್ಲಾಪುರ ತಾಲೂಕ ಆಸ್ಪತ್ರೆಯ ಶವಾಗಾರಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ, ಅಂತಿಮ ಗೌರವ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರೊoದಿಗೆ ಮಾತನಾಡಿದ ಅವರು, ಮೃತ ವಾಚಮನ್ ಜೂಜ್ ಸಿದ್ದಿ ಅವರ ಕುಟುಂಬದವರಿಗೆ ಸರ್ಕಾರದಿಂದ ಸಿಗಬಹುದಾದ ಎಲ್ಲ ಸೌಲಭ್ಯವನ್ನು ಕೂಡಲೇ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಸ್ಮಯ ನ್ಯೂಸ್, ಕಾರವಾರ

Back to top button