Join Our

WhatsApp Group
Info
Trending

ಮನೆಗೆ ಬಡಿದ ಸಿಡಿಲು: ಕೋಣೆ ಸುಟ್ಟುಭಸ್ಮ: ಹಲವು ವಸ್ತುಗಳು ಸುಟ್ಟುಕರಕಲು

ಮುಂಡಗೋಡ: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಆ ಪರಿಣಾಮ ಕರಾವಳಿಯ ಉತ್ತರ ಕನ್ನಡದ ಹಲವೆಡೆ ಮಳೆಯಾಗಿದೆ. ಇದೇ ವೇಳೆ ಕೆಲವೆಡೆ ಸಿಡಿಲು ಬಡಿದು ಅವಾಂತರವಾಗಿದ್ದು, ತಾಲೂಕಿನ ಮನೆಯೊಂದರ ಮೇಲೆ ಸಿಡಲು ಬಿದ್ದು ಹಾನಿಯಾಗಿದೆ. ಮಳೆ ಶುರುವಾದ ಕೆಲಹೊತ್ತಿನಲ್ಲಿ ಮನೆಗೆ ಸಿಡಿಲು ಬಡಿದು ಒಂದು ಕೋಣೆಯು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮನೆಯೊಳಗಿದ್ದ ಕೆಲ ವಸ್ತುಗಳು ಸುಟ್ಟುಹೋಗಿದೆ. ತಾಲೂಕಿನ ಅರ್ಜುನ ಶ್ರೀಮಂತ ಸಿಂಧೆ ಎಂಬುವರ ಮನೆಯಲ್ಲಿ ಈ ಅನಾಹುತ ಸಂಭವಿಸಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Check Also
Close
Back to top button