ಸ್ವಂತಮಗಳನ್ನೇ ಕೊಂದ ಪಾಪಿ ತಂದೆಯ ಬಂಧನ: ಮಗಳನ್ನು ಕೊಂದು ಕೊಲ್ಲೂರಿಗೆ ತೆರಳಿ ಮೂಕಾಂಬಿಕೆಯ ದರ್ಶನ ಪಡೆದಿದ್ದ!

ತಂದೆ ತಾಯಿಗೆ ಮಕ್ಕಳೆಂದರೆ ಸರ್ವಸ್ವ. ಆದರೆ, ಈ ಪಾಪಿ ತಂದೆ ಮಾಡಿದ್ದು ಮಾತ್ರ ತಂದೆ ಎಂಬ ಪದಕ್ಕೆ ಕಪ್ಪುಚುಕ್ಕೆ. ಯಾವುದೋ ಒಬ್ಬ ಜ್ಯೋತಿಷಿಯ ಮಾತು ನಂಬಿ ಮಾಡಬಾರದ ಕೆಲಸ ಮಾಡಿ, ಈಗ ಕಂಬಿ ಎಣಿಸುತ್ತಿದ್ದಾನೆ.

ಕಾರವಾರ: ಜ್ಯೋತಿಷಿಯೊಬ್ಬನ ಮಾತು ನಂಬಿ ಹೆತ್ತ ಮಗಳನ್ನೇ ಕೊಂದು ಅಲ್ಲಿಂದ ಪರಾರಿಯಾಗಿದ್ದ ಆರೋಪಿಯನ್ನು ಕಾರವಾರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳ ಮೂಲಕ ಸಾಹು ಮೋಹನ್ ಎಂದು ತಿಳಿದುಬಂದಿದೆ.

ಈತ ಒಂದು ತಿಂಗಳ ಹಿಂದೆ ವಾಮಾಚಾರಕ್ಕಾಗಿ ಹೆತ್ತ ಮಗಳನ್ನೇ ಬಲಿಕೊಟ್ಟಿದ್ದ. ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದ. ಮಗಳನ್ನು ಕೊಂದು ಕೊಲ್ಲೂರಿಗೆ ತೆರಳಿ ಮೂಕಾಂಬಿಕೆಯ ದರ್ಶನ ಪಡೆದಿದ್ದ ಎಂಬ ಮಾಹಿತಿ ಹೊರಬಿದ್ದಿದೆ.

ಕೊಲ್ಲೂರಿಗೆ ತೆರಳಿ ಮೂಕಾಂಬಿಕೆಯ ದರ್ಶನ ಪಡೆದು, ಅಲ್ಲಿನ ಹೊಟೇಲ್ ಒಂದರಲ್ಲಿ ನಾಲ್ಕು ದಿನ ತಂಗಿದ್ದ. ಈ ವೇಳೆ ಅಲ್ಲಿ ತಂಗಿದ್ದ ಹೊಟೇಲ್‌ಗೆ ಹಣಪಾವತಿಸದೆ ಪರಾರಿಯಾಗಿದ್ದ. ಈ ಸಂಬ0ಧ ಪೊಲೀಸರು ಹೊಟೇಲ್ ಮಾಲೀಕರು ದೂರು ನೀಡಿದ್ದ. ಈ ವೇಳೆ ಪೊಲೀಸರು ತನಿಖೆಗಿಳಿದಾಗ ಕೊಲೆಯ ಕುರಿತು ಮಾಹಿತಿ ದೊರೆತಿದೆ.

ಇದೇ ವೇಳೆ, ಆರೋಪಿಯ ಪತ್ತೆಯಾಗಿ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸುತ್ತಿರುವ ವೇಳೆ ದುಷ್ಕರ್ಮಿಯ ನೆಟ್‌ವರ್ಕ್ ಕಾರವಾರದಲ್ಲಿ ಇರುವುದು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಕಾರವಾರ

Exit mobile version