Follow Us On

WhatsApp Group
Important
Trending

ಸಣ್ಣ ವಿಷಯಕ್ಕೆ ತಮ್ಮನನ್ನು ಸಾಯಿಸಿದ ಅಣ್ಣ: ಬೆಡ್ ಸೀಟ್ ನಿಂದ ಶವಕಟ್ಟಿ ಮನೆಯ ಬೀಗ ಹಾಕಿ ಪರಾರಿ: ಮನೆಗೆ ಬಂದ ತಾಯಿಗೆ ಕಾದಿತ್ತು ಶಾಕ್

ಒಂದು ಸಣ್ಣ ಜಗಳ ಇಲ್ಲಿ ಜೀವವನ್ನೇ ಬಲಿ ತೆಗೆದುಕೊಂಡಿದೆ. ಒಡಹುಟ್ಟಿದ ಸಹೋದರರೇ ವೈರಿಗಳಂತೆ ಹೊಡೆದಾಡಿಕೊಂಡಿದ್ದಾರೆ. ಕೊನೆಯಲ್ಲಿ ಒಬ್ಬ ಸಹೋದರ ಮೃತಪಟ್ಟಿದ್ದು, ತಾಯಿಯ ಗೋಳು ಹೇಳತೀರದು.

ಹೊನ್ನಾವರ: ಕ್ಷುಲ್ಲಕ ಕಾರಣಕ್ಕೆ ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಈ ಘಟನೆ ನಡೆದಿರೋದು ಪಟ್ಟಣದ ಚರ್ಚ್ ರಸ್ತೆಯಲ್ಲಿ.

ಸಣ್ಣ ವಿಷಯಕ್ಕೆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತು. ಹೌದು, ಅಣ್ಣ ಕೆಲಸಕ್ಕೆ ಹೋಗುವುದಿಲ್ಲ, ಮನೆಯನ್ನು ನಾನೊಬ್ಬನೆ ನಿಭಾಯಿಸಬೇಕು. ನಾನೊಬ್ಬನೇ ದುಡಿಯಬೇಕು ಎಂಬ ವಿಷಯಕ್ಕೆ ಜಗಳವಾಗಿದೆ. ಇದೀಗ ಈ ಜಗಳ ಸಾವಿನಲ್ಲಿ ಅಂತ್ಯಕಂಡಿದೆ.

ಕೊಲೆಯಾದ ವ್ಯಕ್ತಿ, ಅರ್ಜುನ ಶಂಕರ ಮೇಸ್ತ (23). ಅಣ್ಣ ಕೃಷ್ಣ ಶಂಕರ ಮೇಸ್ತ ಸಾಯಿಸಿದ ಆರೋಪಿ. ಅಣ್ಣ ತಮ್ಮನನನ್ನು ಸಾಯಿಸಿ ಮಾಡಿ ಬೆಡ್ ಸೀಟ್ ನಿಂದ ಮುಚ್ಚಿ ಮನೆಗೆ ಬೀಗ ಹಾಕಿ ಹೊರಗಡೆ ಹೋಗಿದ್ದಾನೆ ‌ಎನ್ನಲಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಕೆಲಸಕ್ಕೆ ಹೋದ ತಾಯಿ ಕೆಲಸ ಮುಗಿಸಿ ಮನೆಗೆ ಬಂದು ಕಾದು ಕಾದು ಬಳಿಕ ಬೀಗ ಓಡೆದು ಒಳಗೆ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ತಾಯಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ತಲೆ ಮರೆಸಿಕೊಂಡ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್ ಹೊನ್ನಾವರ

Back to top button