Follow Us On

WhatsApp Group
Important
Trending

ಅಂಗಡಿಯ ಬೀಗ ಒಡೆದು 10 ಲಕ್ಷ ರೂಪಾಯಿ ಕಳ್ಳತನ ; ಪರಿಚಯಸ್ಥರಿಂದಲೇ ಕಳ್ಳತನ ಶಂಕೆ: ಮೂಡಿದೆ ಹಲವು ಅನುಮಾನ

ಗೋಕರ್ಣ: ಅಂಗಡಿ ಕಳ್ಳತನ ಮಾಡಿ, ಅಂಗಡಿಯಲ್ಲಿದ್ದ 10 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ತದಡಿಯ ಬೇಲೆಕಾನನಲ್ಲಿ ನಡೆದಿದೆ. ಅಂಗಡಿ ಮಾಲಿಕ ಜಾಗ ಮಾರಿದ ಹಣವನ್ನು ಹಲವು ದಿನಗಳಿಂದ ತನ್ನ ಅಂಗಡಿಯಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ. ಪರಿಚಯಸ್ಥರೇ ಈ ಕೃತ್ಯ ಎಸಗಿದ್ದಾರೆ ಎಂಬ ಗುಮಾನಿ ಎದ್ದಿದೆ. ಅಂಗಡಿಯ ವ್ಯವಹಾರ ಮಾಡಿದ ಹಣವನ್ನು ಮುಟ್ಟದೆ, ಒಂದೇ ಕಡೆ ಇಟ್ಟ 10 ಲಕ್ಷ ರೂಪಾಯಿಯನ್ನು ಮಾತ್ರ, ಯಾವುದೇ ಹುಡುಕಾಟ ನಡೆಸದೆ ಕದ್ದೊಯ್ದಿದ್ದಾರೆ.. ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಪರಿಚಯಸ್ಥರೇ ಅಥವಾ ಹಣವನ್ನು ಇಟ್ಟಿರುವುದನ್ನು ಚೆನ್ನಾಗಿ ಅರಿತ ಯಾರೋ ಈ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಅಂಗಡಿಯ ಬೀಗ ಒಡೆದು ಬೀಗ ಹೊತ್ತೊಯ್ದ ಕಳ್ಳರು, ಮತ್ತೆಲ್ಲೂ ಜಾಲಾಡದೆ ಕೇವಲ ಹಣ ಎಲ್ಲಿದೆ ಇದೆಯೋ ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಶ್ರೀಧರ ಅನಂತ ನಾಯ್ಕ ಎಂಬುವವರ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಘಟನಾ ಸ್ಥಳಕ್ಕೆ ಪಿ. ಎಸ್.ಐ. ನವೀನ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಚರುಕುಗೊಳಿಸಿದ್ದಾರೆ. ಶ್ವಾನದಳ ಆಗಮಿಸಿ ಪರಿಶೀಲನೆ ಮಾಡಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button